ಆಧಾರ್ ಇಲ್ಲದ್ದಕ್ಕೆ ಪಡಿತರ ನಿರಾಕರಣೆ ಸರಿಯಲ್ಲವೆಂದ ಕೇಂದ್ರ
ಸಾರ್ವಜನಿಕ ಪಡಿತರ ನಿರಾಕರಿಸಿದ್ದರಿಂದ ಜಾರ್ಖಂಡ್'ನಲ್ಲಿ ಇತ್ತೀಚೆಗೆ 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ನವದೆಹಲಿ(ಅ.27): ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಅಥವಾ ಪಡಿತರ ಕಾರ್ಡ್'ನೊಂದಿಗೆ ಆಧಾರ್ ಜೋಡಿಸದ್ದಕ್ಕೆ ಪಡಿತರವನ್ನು ನಿರಾಕರಿಸಬಾರದು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಅಲ್ಲದೇ ಆಧಾರ್ ಹೊಂದದೇ ಇರುವ ಕಾರಣಕ್ಕೆ ಫಲಾನುಭವಿ ಕುಟುಂಬಗಳನ್ನು ಪಟ್ಟಿಯಿಂದ ತೆಗೆದುಹಾಕಬಾರದು ಎಂದು ತಿಳಿಸಿದೆ. ಈ ಸಂಬಂಧ ಎಲ್ಲಾ ರಾಜ್ಯಗಳಿಗೆ ಆಹಾರ ಸಚಿವಾಲಯ ಸುತ್ತೋಲೆ ಹೊರಡಿಸಲಾಗಿದೆ.
ಸಾರ್ವಜನಿಕ ಪಡಿತರ ನಿರಾಕರಿಸಿದ್ದರಿಂದ ಜಾರ್ಖಂಡ್'ನಲ್ಲಿ ಇತ್ತೀಚೆಗೆ 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.