ಫೇಸ್​​'ಬುಕ್​ನಲ್ಲಿ  ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ನನ್ನನ್ನು  ತೇಜೋವಧೆ ಮಾಡಿದ್ದಾರೆ ಎಂದು ಸೈಬರ್​​ ಕ್ರೈಂ ಪೊಲೀಸರಿಗೆ ಸುಮನ್ ತನ್ನ ಸಹೋದರಿ ಮೈತ್ರಿ ಮೂಲಕ  ದೂರನ್ನು ದಾಖಲಿಸಿದ್ದಾರೆ.

ಬೆಂಗಳೂರು (ಫೆ.19): ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರೊಬ್ಬರು ತನ್ನನ್ನು ನಿಂದಿಸಿದ್ದಾರೆ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಸೈಬರ್​​ ಕ್ರೈಂ ವಿಭಾಗದ ಮೆಟ್ಟೀಲೇರಿದ್ದಾರೆ.

ಆ ದಿನಗಳು, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳಂತ ಸೂಪರ್​ ಹಿಟ್​​ ಚಿತ್ರಗಳನ್ನು ಸ್ಯಾಂಡಲ್​'ವುಡ್​​​ಗೆ ಕೊಟ್ಟ ನಿರ್ದೇಶಕಿ ಸುಮನಾ ಕಿತ್ತೂರು, ಸಿನಿಮಾ ಪತ್ರಕರ್ತ ಗಣೇಶ್​​ ಕಾಸರಗೋಡು ಮೇಲೆ ಗಂಭಿರ ಆರೋಪ ಮಾಡಿದ್ದಾರೆ.

ಫೇಸ್​​ಬುಕ್​ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ತೇಜೋವಧೆ ಮಾಡಿದ್ದಾರೆ ಎಂದು ಸೈಬರ್​​ ಕ್ರೈಂ ಪೊಲೀಸರಿಗೆ ಸುಮನ್ ತನ್ನ ಸಹೋದರಿ ಮೈತ್ರಿ ಮೂಲಕ ದೂರನ್ನು ದಾಖಲಿಸಿದ್ದಾರೆ.

ಈ ಕುರಿತಂತೆ ಇದೀಗ ಪೊಲೀಸರು ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗಣೇಶ್​ ಕಾಸರಗೋಡು ತಮ್ಮ ಫೇಸ್​​ಬುಕ್​​ ಅಕೌಂಟ್​​ನಲ್ಲಿ ಹಾಕಿದ್ದ ಸ್ಟೇಟಸ್​​ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ಜನ ಪ್ರತಿಕ್ರಿಯಿಸಿದ್ದರು. ಜನ ಕೇಳಿದ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಸಮಾಜಾಯಿಶಿಯನ್ನು ಗಣೇಶ್​ ಕಾಸರಗೋಡು ನೀಡಿದ್ದಾರೆ.