‘ಅಮಿತ್ ಶಾ ಕೆಳಗಿಳಿಯಲಿ, ಜಯ್ ಶಾ ವಿರುದ್ಧ ತನಿಖೆಯಾಗಲಿ, ಪ್ರಧಾನಿ ಮಾತನಾಡಲಿ’
ಅಮಿತ್ ಶಾ ಪುತ್ರ ಜಯ್ ಶಾ ವಹಿವಾಟುಗಳ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಬೆಂಗಳೂರು: ಅಮಿತ್ ಶಾ ಪುತ್ರ ಜಯ್ ಶಾ ವಹಿವಾಟುಗಳ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಅಮಿತ್ ಶಾ ಪುತ್ರ ಜಯ್ ಶಾ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದೇಕೆ? ಅವರು ಮೌನ ಮುರಿದು ತನಿಖೆಯನ್ನು ಆದೇಶಿಸಬೇಕು, ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಅಮಿತ್ ಶಾ ತಮ್ಮ ಹುದ್ದೆಯಿಂದ ಕೆಳಗಿಳಯಬೇಕು, ಆರೋಪಗಳಿಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದಿರುವ ದಿನೇಶ್ ಗುಂಡೂರಾವ್, ಪ್ರಧಾನಿ ಮೋದಿ ಮೌನ ಮುರಿದು 130 ಕೋಟಿ ಭಾರತೀಯರಿಗೆ ಸತ್ಯವೇನೆಂದು ಹೇಳಲಿ ಎಂದು ಆಗ್ರಹಿಸಿದ್ದಾರೆ.