ಪ್ರಧಾನ ಕಾರ್ಯದರ್ಶಿ ಹುದ್ದೆ ಯಿಂದಲೂ ದಿಗ್ವಿಜಯ್ ಹೊರಕ್ಕೆ
ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ಸಿಂಗ್ ಅವರನ್ನು ಆಂಧ್ರ ಎಐಸಿಸಿ ಉಸ್ತುವಾರಿ ಸ್ಥಾನದಿಂದ ಕೆಳಗಿಳಿಸಿ ಕೇರಳದ ಮಾಜಿ ಸಿಎಂ ಊಮ್ಮನ್ ಚಾಂಡಿ ಅವರನ್ನು ನೇಮಿಸಲಾಗಿದೆ.
ನವದೆಹಲಿ: ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ಸಿಂಗ್ ಅವರನ್ನು ಆಂಧ್ರ ಎಐಸಿಸಿ ಉಸ್ತುವಾರಿ ಸ್ಥಾನದಿಂದ ಕೆಳಗಿಳಿಸಿ ಕೇರಳದ ಮಾಜಿ ಸಿಎಂ ಊಮ್ಮನ್ ಚಾಂಡಿ ಅವರನ್ನು ನೇಮಿಸಲಾಗಿದೆ.
ಇದರೊಂದಿಗೆ ಎಐಸಿಸಿಯಲ್ಲಿ ದಿಗ್ವಿಜಯ್ ಹೊಂದಿದ್ದ ಕೊನೆಯ ಹುದ್ದೆಯೂ ಕೈತಪ್ಪಿದೆ. ಸಿಂಗ್ರನ್ನು ಈ ಹಿಂದೆ ಗೋವಾ, ಕರ್ನಾಟಕ, ತೆಲಂಗಾಣ ಉಸ್ತುವಾರಿಯಿಂದಲೂ ತೆಗೆಯಲಾಗಿತ್ತು.
2 ವರ್ಷಗಳ ಹಿಂದೆ ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿದ್ದರು.