ತಮಿಳುನಾಡಿಗೆ ನೀರು ಬಿಡದೇ ಇದ್ದಿದ್ದರೆ ಕರ್ನಾಟಕಕ್ಕೆ ತೊಂದೆರೆಯಾಗುತ್ತಿತ್ತು

ಮಂಡ್ಯ(ಸೆ.11): ತಮಿಳುನಾಡಿಗೆ ನೀರು ಬಿಡಲು ಸಿಎಂ ಸಿದ್ದರಾಮಯ್ಯಗೆ ಹೇಳಿದ್ದೆ ನಾನು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಈಗ ನೀರು ಬಿಡದಿದ್ದರೆ ಮುಂದೆ ಕರ್ನಾಟಕಕ್ಕೆ ತೊಂದೆರೆಯಾಗುತ್ತಿತ್ತು, ಅ.18ರ ವಿಚಾರಣೆ ವೇಳೆ ಕರ್ನಾಟಕಕ್ಕೆ ಸಂಕಷ್ಟ ಎದುರಾಗುತ್ತಿತ್ತು ಎಂದು ಕೆಆರ್​ಎಸ್​ನಲ್ಲಿ​ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಇದಕ್ಕೂ ಮುನ್ನ, ದೇವೇಗೌಡರು, ಕೆಆರ್​ಎಸ್ ಜಲಾಶಯದ ವೈಮಾನಿಕ ​ಸಮೀಕ್ಷೆ ನಡೆಸಿದರು. ಇದೀಗ, ಹಾರಂಗಿ, ಕಬಿನಿ, ಹೇಮಾವತಿ ಡ್ಯಾಂ ವೈಮಾನಿಕ ಸಮೀಕ್ಷೆಗೆ ನಿರ್ಧರಿಸಿದ್ದಾರೆ. ಜಲಾಶಯಗಳ ವಾಸ್ತವ ಸ್ಥಿತಿ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಿರುವ ದೇವೇಗೌಡರು, ಅಧಿಕಾರಿಗಳ ಜೊತೆಯೂ ಚರ್ಚಿಸಲಿದ್ದಾರೆ.