ಹುಳಿಯಾರು ತಾಲೂಕು ಬಳ್ಳೇಕಟ್ಟೆಯಲ್ಲಿನ ವಿದ್ಯಾವಾರಿಧಿ ಶಾಲೆಯಲ್ಲಿ ಬುಧವಾರ ರಾತ್ರಿ ವಿಷಾಹಾರ ಸೇವಿಸಿದ ವಿದ್ಯಾರ್ಥಿಗಳು ಇಹಲೋಕ ತ್ಯಜಿಸುವ ಮುನ್ನ 26 ಮಕ್ಕಳ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ತುಮಕೂರು(ಮಾ.10): ಹುಳಿಯಾರು ತಾಲೂಕು ಬಳ್ಳೇಕಟ್ಟೆಯಲ್ಲಿನ ವಿದ್ಯಾವಾರಿಧಿ ಶಾಲೆಯಲ್ಲಿ ಬುಧವಾರ ರಾತ್ರಿ ವಿಷಾಹಾರ ಸೇವಿಸಿದ ವಿದ್ಯಾರ್ಥಿಗಳು ಇಹಲೋಕ ತ್ಯಜಿಸುವ ಮುನ್ನ 26 ಮಕ್ಕಳ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಕಣ್ಣೆದುರೇ ವಿಲವಿಲನೆ ಒದ್ದಾಡುತ್ತಿದ್ದ ಈ ಮಕ್ಕಳನ್ನು ನೋಡಿ ಉಳಿದವರು ಊಟ ಮಾಡದೆ ಕೈ ತೊಳೆದುಕೊಂಡರು. ಒಂದು ಕೈ ತಲೆ ಮೇಲೆ ಮತ್ತೊಂದು ಕೈ ಎದೆಮೇಲೆ ಇಟ್ಟುಕೊಂಡು ಅಸಹನೀಯ ನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳು ಕುಸಿದು ಬೀಳುವ ಮುನ್ನ ಯಾರಾದರೂ ಊಟ ತಿನ್ನುತ್ತಿದ್ದೀರಾ ಎಂದು ನೋಡಿಯೇ ಪ್ರಜ್ಞೆ ಕಳೆದುಕೊಂಡರಂತೆ. ಊಟ ತಿಂದ 10 ನಿಮಿಷ ಕಾಲ ಕೈ ಕಾಲು, ಎದೆನೋವು, ತಲೆನೋವು, ತಲೆ ಸುತ್ತಿನಿಂದ ನರಳಿದ ಈ ಮೂವರು ವಿದ್ಯಾರ್ಥಿಗಳು ಊಟ ಮಾಡಬೇಡಿ ಎಂದು ಬೇಡಿಕೊಳ್ಳದೇ ಇದ್ದಿದ್ದರೆ ಊಹೆಗೂ ನಿಲುಕಲಾರದಷ್ಟುದೊಡ್ಡ ಅನಾಹುತ ಸಂಭವಿಸುತ್ತಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ಉತ್ತಮ ಅಂಕ ಪಡೆಯಬೇಕೆಂಬ ಹಠ ತೊಟ್ಟಿದ್ದ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಈಗ ಜೀವ ಬಿಟ್ಟರು.
ವರದಿ: ಉಗಮ ಶ್ರೀನಿವಾಸ್, ಕನ್ನಡ ಪ್ರಭ
