ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ: ಇಂದು ಅಂತಿಮ ವಿಚಾರಣೆ
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಅರ್ಜಿಯ ಅಂತಿಮ ವಿಚಾರಣೆ ಹೈ ಕೋರ್ಟ್ ನಲ್ಲಿಂದು ನಡೆಯಲಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ರೋಹಿಣಿ ಸಿಂಧೂರಿ.
ಹಾಸನ (ಮೇ. 30): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಅರ್ಜಿಯ ಅಂತಿಮ ವಿಚಾರಣೆ ಹೈ ಕೋರ್ಟ್ ನಲ್ಲಿಂದು ನಡೆಯಲಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ರೋಹಿಣಿ ಸಿಂಧೂರಿ.
ಅವಧಿಗೂ ಮುನ್ನ ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಿಎಟಿ ಮೊರೆ ಹೋಗಿದ್ದರು. ಸರಕಾರದ ವರ್ಗಾವಣೆ ಆದೇಶವನ್ನು ಎತ್ತಿ ಹಿಡಿದಿದ್ದ ಸಿಎಟಿ ರೋಹಿಣಿ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ವಿರುದ್ಧ ಎರಡನೇ ಬಾರಿಗೆ ಹೈ ಕೋರ್ಟ್ ಮೆಟ್ಟಲೇರಿದ್ದರು ರೋಹಿಣಿ ಸಿಂಧೂರಿ.
ಈ ಹಿಂದೆ ಮೂರು ಬಾರಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಇಂದು ಅಂತಿಮ ವಿಚಾರಣೆ ನಡೆಯಲಿದೆ.