ಬೆಂಗಳೂರು (ಸೆ.16): ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್. ​ಎಸ್.​ ಆಸ್ಪತ್ರೆಗಳು ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುವುದಕ್ಕೆ ಬಿಬಿಎಂಪಿ ಹಿಂದೇಟು ಹಾಕುತ್ತಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಮೇಲಿರುವ ನಟ ದರ್ಶನ್​ ಹಾಗೂ ಎಸ್​ಎಸ್​ ಆಸ್ಪತ್ರೆ ತೆರವು ವಿಚಾರ ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಪಾಲಿಕೆ ಹಾಗೂ ಬಿಡಿಎ ಕೈಚೆಲ್ಲಿದೆ.

ದೊಡ್ಡವರ ತೆರವಿಗೆ ಮುಂದಾಗ ಇಲಾಖೆಗಳು ತಪ್ಪಿಸಿಕೊಳ್ಳಲು ಕಾರಣಗಳ ಲಿಸ್ಟ್​ ರೆಡಿ ಮಾಡಿಕೊಂಡಿದೆ. ಈ ಪ್ರಕಾರ ರಾಜರಾಜೇಶ್ವರಿ ನಗರದಲ್ಲಿ ಇರುವ ಐಡಿಯಲ್ ಹೋಮ್ಸ್ ಲೇಔಟ್ನಲ್ಲಿರುವ ದರ್ಶನ್ ಮನೆ, ಎಸ್​ಎಸ್​ ಆಸ್ಪತ್ರೆ ಇರುವ ಲೇಔಟ್​ ಬಿಡಿಎ ವ್ಯಾಪ್ತಿಗೆ ಬರುತ್ತದೆ.

1989ರಲ್ಲಿ ಬಿಡಿಎ ಪರಿಷ್ಕೃತ ನಕ್ಷೆಗೆ ಅನುಮತಿ ಕೊಟ್ಟಿತ್ತು. ಈ ನಕ್ಷೆ ಮಂಜೂರಾತಿ ಪ್ರಶ್ನಿಸಿ ಸಂಘಟನೆಯೊಂದು ಹೈಕೋರ್ಟ್ ಮೆಟ್ಟಿಲು ಏರಿದಾಗ 2003ರಲ್ಲಿ ಬಿಡಿಎ ಹಾಗೂ ಡಿಸಿ ಜಂಟಿ ಸರ್ವೇ ನಡೆಸಿ ಒತ್ತುವರಿಯಾಗಿದ್ದರೆ ತೆರವು ಗೊಳಿಸುವಂತೆ ಕೋರ್ಟ್​ ಆದೇಶ ನೀಡಿತ್ತು. ಈ ಪ್ರಕಾರ 2014ರಲ್ಲಿ ಡಿಸಿ ತೆರವಿಗೆ ಆದೇಶ ನೀಡಿದ್ದಾರೆ. ಹಾಗಾಗಿ ಒತ್ತುವರಿ ತೆರವು ವಿಚಾರ ಡಿಸಿ ವಿವೇಚನೆಗೆ ಬಿಟ್ಟಿದ್ದು ಈಗ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳುತ್ತಿದ್ದಾರೆ.