ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಒಡೆತನದ 'ನಿರಾಮಯ' ಎಂಬ ಹೆಸರಿನ ರೆಸಾರ್ಟ್ ಮೇಲೆ ಸಿಪಿಐ-ಎಂ ಕಾರ್ಯಕರ್ತರು ದಾಳಿ ನಡೆಸಿ ಸಾಕಷ್ಟು ಹಾನಿಗೊಳಿಸಿದ್ದಾರೆ. ಕುಮಾರಕೋಂ ಬಳಿ ಇರುವ ನಿರಾಮಯ ಎನ್ನುವ ರೆಸಾರ್ಟ್ ಮೇಲೆ ಸಿಪಿಐ (ಎಂ) ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ದಾಳಿಯಿಂದ ರೆಸಾರ್ಟ್'ಗೆ ವ್ಯಾಪಕ ಹಾನಿ ಸಂಭವಿಸಿದೆ ಎಂದು ಜುಪಿಟರ್ ಕ್ಯಾಪಿಟಲ್'ನ ಆಡಳಿತ ಮಂಡಳಿ ತಿಳಿಸಿದೆ.

ಕೇರಳ (ನ.24): ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಒಡೆತನದ 'ನಿರಾಮಯ' ಎಂಬ ಹೆಸರಿನ ರೆಸಾರ್ಟ್ ಮೇಲೆ ಸಿಪಿಐ-ಎಂ ಕಾರ್ಯಕರ್ತರು ದಾಳಿ ನಡೆಸಿ ಸಾಕಷ್ಟು ಹಾನಿಗೊಳಿಸಿದ್ದಾರೆ. ಕುಮಾರಕೋಂ ಬಳಿ ಇರುವ ನಿರಾಮಯ ಎನ್ನುವ ರೆಸಾರ್ಟ್ ಮೇಲೆ ಸಿಪಿಐ (ಎಂ) ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ದಾಳಿಯಿಂದ ರೆಸಾರ್ಟ್'ಗೆ ವ್ಯಾಪಕ ಹಾನಿ ಸಂಭವಿಸಿದೆ ಎಂದು ಜುಪಿಟರ್ ಕ್ಯಾಪಿಟಲ್'ನ ಆಡಳಿತ ಮಂಡಳಿ ತಿಳಿಸಿದೆ.

Add Asianetnews Kannada as a Preferred SourcegooglePreferred

 ಡಿವೈಎಫ್'ಐ ಹಾಗೂ ಸಿಪಿ-ಎಂ ಯುವ ಕಾರ್ಯಕರ್ತರ ದಾಳಿಯಲ್ಲಿ 5 ವಿಲ್ಲಾಗಳು ಹಾನಿಗೊಳಗಾಗಿದ್ದು, ಕುರ್ಚಿ, ಟೇಬಲ್'ಗಳನ್ನು ಪುಡಿ ಪುಡಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.