Asianet Suvarna News Asianet Suvarna News

ರೈತರಿಗೆ ಪರಿಹಾರ ನೀಡದ ರೈಲ್ವೆ ಇಲಾಖೆ; ರೈಲನ್ನೇ ಜಪ್ತಿ ಮಾಡಿದ ಕೋರ್ಟ್!

ಹರಿಹರ-ಕೊಟ್ಟೂರು ರೈಲ್ವೆ ಮಾರ್ಗಕ್ಕೆ ರೈತರು  ಭೂಮಿ ನೀಡಿದ್ದು, ರೈಲ್ವೆ ಇಲಾಖೆ ರೈತರಿಗೆ 37 ಲಕ್ಷ ರೂಪಾಯಿ ನೀಡಬೇಕಿತ್ತು. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ಹಣ ಪಾವತಿಸಲಿರಲಿಲ್ಲ.

Court Seizes Train for not Paying Compensation to the Farmers

ದಾವಣಗೆರೆ (ಅ.24): ರೈತರಿಗೆ ಪರಿಹಾರ ನೀಡದ ರೈಲ್ವೆ ಇಲಾಖೆಗೆ ಸ್ಥಳೀಯ ನ್ಯಾಯಾಲಯವು ಬಿಸಿ ಮುಟ್ಟಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ.     

ಹರಿಹರ-ಕೊಟ್ಟೂರು ರೈಲ್ವೆ ಮಾರ್ಗಕ್ಕೆ ರೈತರು  ಭೂಮಿ ನೀಡಿದ್ದು, ರೈಲ್ವೆ ಇಲಾಖೆ ರೈತರಿಗೆ 37 ಲಕ್ಷ ರೂಪಾಯಿ ನೀಡಬೇಕಿತ್ತು. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ಹಣ ಪಾವತಿಸಲಿರಲಿಲ್ಲ.

ರೈಲ್ವೇ ಇಲಾಖೆಯ ವಿಳಂಬ ನಿತಿಯಿಂದ ಬೇಸತ್ತ ರೈತರು ಕೋರ್ಟ್ ಮೊರೆ ಹೋಗಿದ್ದರು.

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಹರಿಹರ ಪ್ರಧಾನ ಸಿವಿಲ್ ಕೋರ್ಟ್ ರೈಲು ಜಪ್ತಿಗೆ ಆದೇಶ  ನೀಡಿದೆ. ಬಳಿಕ ಕೋರ್ಟ್ ಸಿಬ್ಬಂದಿ  ಧಾರವಾಡ - ಮೈಸೂರು ಇಂಟರ್ ಸಿಟಿ ರೈಲನ್ನು ಜಪ್ತಿ  ಮಾಡಿದ್ದಾರೆ. ಕೋರ್ಟ್ ಕ್ರಮದಿಂದ, ರೈಲು ಸುಮಾರು ಹೊತ್ತು ಹರಿಹರ ನಿಲ್ದಾಣದಲ್ಲೇ ನಿಲ್ಲುವಂತಾಯಿತಲ್ಲದೇ, ಪ್ರಯಾಣಿಕರು ಪರದಾಡಬೇಕಾಯಿತು. 

Follow Us:
Download App:
  • android
  • ios