ಚಿಕ್ಕರಾಯಪ್ಪಗೆ ’ರಾಜ’ಆಶ್ರಯ : ಮುಖ್ಯಾತಿ'ಮುಖ್ಯ' ರಾಜಕಾರಣಿಯ ಫಾರ್ಮ್ ಹೌಸ್'ನಲ್ಲಿರುವ ಶಂಕೆ !
ಆಶ್ರಯ ನೀಡಿದ ರಾಜಕಾರಣಿ ಹಾಗೂ ಆಶ್ರಯ ತಾಣದ ಬಗ್ಗೆ ಇಡಿ ಅಧಿಕಾರಿಗಳಿಗೆ ಖಚಿತ ಮಾಹಿತಿಯಿದ್ದು, 'ಮುಖ್ಯಾತಿಮುಖ್ಯ' ರಾಜಕಾರಣಿಯೊಬ್ಬರ ಫಾರ್ಮ್ ಹೌಸ್ನಲ್ಲಿ ಅಡಗಿ ಕುತಿರುವ ಚಿಕ್ಕರಾಯಪ್ಪ ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಲು ಚಿಂತನೆ ನಡೆಸಿದ್ದಾರೆ.
ಬೆಂಗಳೂರು(ಡಿ.28): ಬ್ಲ್ಯಾಕ್ ಅಂಡ್ ದಂಧೆಯಲ್ಲಿ ಶಾಮೀಲಾದ ಭ್ರಷ್ಟ ಅಧಿಕಾರಿ ಚಿಕ್ಕರಾಯಪ್ಪ ನಾಪತ್ತೆಯಾಗಿ ಹಲವು ದಿನಗಳೆ ಕಳೆದಿವೆ. ಕಾವೇರಿ ನಿಗಮ ಮಂಡಳಿ ಎಂಡಿ ಆಗಿದ್ದ ಚಿಕ್ಕರಾಯಪ್ಪ ಐಟಿ ದಾಳಿ ನಂತರ ತಲೆಮರೆಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಚಿಕ್ಕರಾಯಪ್ಪ ಅವರಿಗೆ ರಾಜ್ಯದ ಪ್ರಭಾವಿ ರಾಜಕಾರಣಿ ಒಬ್ಬರಿಂದ ಆಶ್ರಯ ಸಿಕ್ಕಿದೆ ಎನ್ನಲಾಗಿದೆ.
ಆಶ್ರಯ ನೀಡಿದ ರಾಜಕಾರಣಿ ಹಾಗೂ ಆಶ್ರಯ ತಾಣದ ಬಗ್ಗೆ ಇಡಿ ಅಧಿಕಾರಿಗಳಿಗೆ ಖಚಿತ ಮಾಹಿತಿಯಿದ್ದು, 'ಮುಖ್ಯಾತಿಮುಖ್ಯ' ರಾಜಕಾರಣಿಯೊಬ್ಬರ ಫಾರ್ಮ್ ಹೌಸ್ನಲ್ಲಿ ಅಡಗಿ ಕುತಿರುವ ಚಿಕ್ಕರಾಯಪ್ಪ ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಲು ಚಿಂತನೆ ನಡೆಸಿದ್ದಾರೆ.
ಸ್ಥಳೀಯ ಪೊಲೀಸರ ಸಹಾಯ ಕೋರಲು ಮುಂದಾಗಿರುವ ಇಡಿ ಅಧಿಕಾರಿಗಳು ಕಾನೂನು ತಜ್ಞರ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಅಲ್ಲದೆ ಆಶ್ರಯ ನೀಡಿರುವ ರಾಜಕಾರಣಿಯ ಮೇಲೂ ಕ್ರಮಕ್ಕೆ ಅಧಿಕಾರಿಗಳ ಚಿಂತನೆ ನಡೆಸಿದ್ದಾರೆ. ಆದರೆ ಮುಖ್ಯಾತಿಮುಖ್ಯ ಹುದ್ದೆಯಲ್ಲಿರುವ ರಾಜಕಾರಣಿಯ ಮೇಲೆ ಕ್ರಮ ಸಾಧ್ಯವೆ ಎನ್ನುವುದು ಸದ್ಯದ ಪ್ರಶ್ನೆ !