ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ನಡೆ ಈಗ ನಿಗೂಢವಾಗಿದೆ. ರಮೇಶ್ ಜಾರಕಿಹೊಳಿ ಹೊಸ ಪ್ಲಾನ್ ಮಾಡುತ್ತಿದ್ದು, ಶೀಘ್ರವೇ ಈ ಬಗ್ಗೆ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. 

ಬೆಂಗಳೂರು : ಮತ್ತೊಬ್ಬ ಅತೃಪ್ತ ರಮೇಶ್‌ ಜಾರ​ಕಿ​ಹೊಳಿ ಅವರ ನಡೆ ನಿಗೂ​ಢ​ವಾ​ಗಿದೆ. ಕಳೆದ ಎರಡು ದಿನ​ಗ​ಳಿಂದ ಬೆಂಗ​ಳೂ​ರಿ​ನಲ್ಲೇ ಇದ್ದ ರಮೇಶ್‌ ಜಾರ​ಕಿ​ಹೊಳಿ ಅವರು ಶಾಸಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು ನಗ​ರಕ್ಕೆ ಆಗ​ಮಿ​ಸಿದ ಬೆನ್ನಲ್ಲೇ ಗೋಕಾ​ಕ್‌ಗೆ ತೆರ​ಳಿ​ದ​ರು.

ರಮೇಶ್‌ ಜಾರ​ಕಿ​ಹೊಳಿ ಅವರು ಸಿದ್ದ​ರಾ​ಮ​ಯ್ಯ ಸೇರಿ​ದಂತೆ ಯಾವುದೇ ಕಾಂಗ್ರೆಸ್‌ ನಾಯ​ಕ​ರನ್ನು ಸಂಪ​ರ್ಕಿ​ಸಿಲ್ಲ. ಕೆಲ ಕಾಂಗ್ರೆಸ್‌ ಶಾಸ​ಕ​ರೊಂದಿಗೆ ಅವರು ಮಾತು​ಕತೆ ನಡೆ​ಸಿ​ದ್ದಾರೆ ಎನ್ನ​ಲಾ​ಗಿ​ದ್ದರೂ, ಅವರ ನಡೆ ನಿಗೂ​ಢ​ವಾ​ಗಿದೆ. 

ಕೆಲ ಮೂಲ​ಗಳ ಪ್ರಕಾರ ರಮೇಶ್‌ ಜಾರ​ಕಿ​ಹೊಳಿ ಅವರ ತಂಡವು ತಮ್ಮ ಸಂಖ್ಯೆ​ಯನ್ನು ಹೆಚ್ಚಿ​ಸಿ​ಕೊ​ಳ್ಳುವ ಪ್ರಯ​ತ್ನ​ದ​ಲ್ಲಿದ್ದು, ಈ ಪ್ರಯತ್ನ ಶೀಘ್ರವೇ ಫಲ ಕೊಡ​ಲಿದೆ. ಕೆಲವೇ ದಿನ​ಗ​ಳಲ್ಲಿ ಈ ಬಗ್ಗೆ ಬಹಿ​ರಂಗ ಘೋಷ​ಣೆಯೂ ಈ ತಂಡ​ದಿಂದ ಹೊರಬೀಳ​ಲಿದೆ ಎನ್ನ​ಲಾ​ಗು​ತ್ತಿದೆ.

ಆದರೆ, ಇದನ್ನು ಕಾಂಗ್ರೆಸ್‌ ಮೂಲ​ಗಳು ಅಲ್ಲ​ಗ​ಳೆ​ದಿದ್ದು, ರಮೇಶ್‌ ಜಾರ​ಕಿ​ಹೊಳಿ ಅವ​ರೊಂದಿಗೆ ಗುರು​ತಿ​ಸಿ​ಕೊ​ಳ್ಳಲು ಯಾವುದೇ ಕಾಂಗ್ರೆಸ್‌ ಶಾಸ​ಕರು ತಯಾ​ರಿಲ್ಲ. ಶೀಘ್ರವೇ ರಮೇಶ್‌ ಜಾರ​ಕಿ​ಹೊಳಿ ಅವ​ರನ್ನು ಸಮಾ​ಧಾ​ನ​ಪ​ಡಿ​ಸುವ ಕಾರ್ಯ​ವನ್ನು ರಾಜ್ಯ ನಾಯ​ಕರು ನಡೆ​ಸ​ಲಿ​ದ್ದಾರೆ ಎನ್ನು​ತ್ತ​ವೆ.