ಪ್ರಧಾನಿ ಅಂಗಳಕ್ಕೆ ತಲುಪಿದ ಸಿಎಂ ವಾಚ್ ಪ್ರಕರಣ

ಬೆಂಗಳೂರು(ಆ.01): ಸಿಎಂ ಸಿದ್ದರಾಮಯ್ಯ ದುಬಾರಿ ವಾಚ್ ಪ್ರಕರಣ ಇದೀಗ ಪ್ರಧಾನಿ ಅಂಗಳಕ್ಕೆ ತಲುಪಿದೆ. ತಮಗೆ ಹ್ಯೂಬ್ಲಟ್​ ವಾಚ್ ಕೊಟ್ಟ ಉದ್ಯಮಿಗೆ ಸಿಎಂ ಸಿದ್ದರಾಮಯ್ಯ ಉಡುಪಿಯ ಸರ್ಕಾರಿ ಆಸ್ಪತ್ರೆ ಮತ್ತು ಜೋಗ್​ಫಾಲ್ಸ್ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಯೋಜನೆಗಳನ್ನು ನೀಡಿರೋದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ ಮಾಡಿದರು. ಈ ಸಂಬಂಧ ಅಡ್ವೊಕೇಟ್ ರಜತ್ ಗೌಡ ಎಂಬುವರು, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಜೊತೆಗೆ ಮಾಜಿ ಪ್ರಧಾನಿ ದೇವೇಗೌಡ, ಸ್ಪೀಕರ್​ಗೂ ಪತ್ರ ಬರೆದಿದ್ದಾರೆ.