Asianet Suvarna News Asianet Suvarna News

ಚಾಮುಂಡೇಶ್ವರಿಯಲ್ಲೇ ಸ್ಪರ್ಧೆ; ಎಚ್’ಡಿಕೆ ಕೇಳಿ ನಾನು ರಾಜಕಾರಣ ಮಾಡಬೇಕಿಲ್ಲ ಎಂದ ಸಿಎಂ

ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಾನು ಸ್ಪರ್ಧಿಸುತ್ತೇನೆ.   ಕುಮಾರಸ್ವಾಮಿ ಕೇಳಿಕೊಂಡು ನಾನು ರಾಜಕಾರಣ ಮಾಡಬೇಕಿಲ್ಲ ಎಂದು ಸಿಎಂ ಇಂದು ಮೈಸೂರಿನಲ್ಲಿ ಹೇಳಿದ್ದಾರೆ.  

CM Siddaramaiah Slams Kumara Swamy

ಮೈಸೂರು (ಮಾ. 29):  ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಾನು ಸ್ಪರ್ಧಿಸುತ್ತೇನೆ.   ಕುಮಾರಸ್ವಾಮಿ ಕೇಳಿಕೊಂಡು ನಾನು ರಾಜಕಾರಣ ಮಾಡಬೇಕಿಲ್ಲ ಎಂದು ಸಿಎಂ ಇಂದು ಮೈಸೂರಿನಲ್ಲಿ ಹೇಳಿದ್ದಾರೆ.  

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಎಷ್ಟು ಸಲ ನಿಂತಿದ್ದೀನಿ ಅಂತ ಕುಮಾರಸ್ವಾಮಿಗೆ ಗೊತ್ತಾ? ನಾನು ಚಾಮುಂಡೇಶ್ವರಿಯಲ್ಲಿ 7 ಬಾರಿ ಸ್ಪರ್ಧಿಸಿದ್ದೇನೆ.  5 ಬಾರಿ ಗೆದ್ದಿದ್ದೇನೆ. 2 ಬಾರಿ ಸೋತಿದ್ದೇನೆ.  ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನನ್ನ ಸ್ಪರ್ಧೆ.  ಯಾವುದೇ ಅನುಮಾನ ಬೇಡ. ಇಲ್ಲಿಯೇ ನಿಲ್ಲುತ್ತೇವೆ. ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ನನಗೆ ನಂಬಿಕೆ ಇದೆ.  ನಾನು ಮತ್ತೆ ಗೆಲ್ಲುತ್ತೇನೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. 
 

Follow Us:
Download App:
  • android
  • ios