ಚಾಮರಾಜಪೇಟೆಗೆ ‘ಕೈ’ ಅಭ್ಯರ್ಥಿ ಅಂತಿಮ?
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ವಾಲ್ಮೀಕಿ ಭವನ ಉದ್ಘಾಟನೆ ವೇಳೆ ಜಮೀರ್ ಪರ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಜಮೀರ್ ಪರವಾಗಿ ಮತ ಕೇಳಲು ಬರುತ್ತೇನೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಸರ್ಕಾರದ ಎಲ್ಲಾ ಸಾಧನೆಗಳ ಈಗ ಹೇಳಲ್ಲ, ಇಲ್ಲಿಗೆ ಜಮೀರ್ ಪರವಾಗಿ ಮತ ಕೇಳಲು ಬರುತ್ತೇನೆ. ಆಗ ಎಲ್ಲಾ ವಿವರ ಹೇಳುತ್ತೇನೆ, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.