Asianet Suvarna News Asianet Suvarna News

ಸಿಎಂ ಸಿದ್ಧರಾಮಯ್ಯರಿಗೆ ಫೇಸ್'ಬುಕ್'ನಲ್ಲಿ ಕೊಲೆ ಬೆದರಿಕೆ!

ಡಿಸೆಂಬರ್ 12 ರಂದು ಸಂಜೆ 6 ಗಂಟೆಗೆ ಫೇಸ್'ಬುಕ್ ಸ್ಟೇಟಸ್'ನ್ನು ಅಪ್'ಡೇಟ್ ಮಾಡಿದ್ದ ಸುನೀಲ್ ರಾಯ್ಕರ್ 'ಲೇ ಮುಖ್ಯಮಂತ್ರಿ ನಮ್ಮ ಊರಿಗೆ ಬಂದ್ರೇ ನಿನ್ನನ್ನ ಕೊಂದೆ ಬಿಡತ್ತಾರೆಲೇ' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಸಿಎಂ ಸಿದ್ಧರಾಮಯ್ಯರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಇತರ ಪೋಸ್ಟ್'ಗಳನ್ನೂ ಅಪ್'ಡೇಟ್ ಮಾಡಿದ್ದಾನೆ.

CM Siddaramaiah Gets Life Threat From Facebook

ಕೊಪ್ಪಳ(ಡಿ.14): ಕೊಪ್ಪಳದ ಗಂಗಾವತಿ ತಾಲೂಕಿನ ಸುನೀಲ್ ರಾಯ್ಕರ್ ಎಂಬಾತ ಸಿಎಂ ಸಿದ್ಧರಾಮಯ್ಯರಿಗೆ ಫೇಸ್'ಬುಕ್'ನಲ್ಲಿ ಕೊಲೆ ಬೆದರಿಕೆಯೊಡ್ಡಿರುವ ವಿಚಾರ ಬೆಳಕಿಗೆ ಬಂದಿದೆ.

ಡಿಸೆಂಬರ್ 12 ರಂದು ಸಂಜೆ 6 ಗಂಟೆಗೆ ಫೇಸ್'ಬುಕ್ ಸ್ಟೇಟಸ್'ನ್ನು ಅಪ್'ಡೇಟ್ ಮಾಡಿದ್ದ ಸುನೀಲ್ ರಾಯ್ಕರ್ 'ಲೇ ಮುಖ್ಯಮಂತ್ರಿ ನಮ್ಮ ಊರಿಗೆ ಬಂದ್ರೇ ನಿನ್ನನ್ನ ಕೊಂದೆ ಬಿಡತ್ತಾರೆಲೇ' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಸಿಎಂ ಸಿದ್ಧರಾಮಯ್ಯರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಇತರ ಪೋಸ್ಟ್'ಗಳನ್ನೂ ಅಪ್'ಡೇಟ್ ಮಾಡಿದ್ದಾನೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಗಾವತಿ ನಗರ ಸಭೆ ಮಾಜಿ ಅಧ್ಯಕ್ಷ ನಿನ್ನೆ ಗಂಗಾವತಿ ನಗರ ಠಾಣೆಯಲ್ಲಿ ಸುನೀಲ್ ರಾಯ್ಕರ್ ವಿರುದ್ಧ ದೂರು ದಾಖಲಿಸಿದ್ದು, ಆರೋಪಿ ಸುನೀಲ್ ವಿರುದ್ಧ FIR ದಾಖಲಿಸಲಾಗಿದೆ.  

Follow Us:
Download App:
  • android
  • ios