ಮೈಸೂರು(ಅ.6): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸ್ತಾರಾ. ಇಂಥದ್ದೊಂದು ಅನುಮಾನ ಹುಟ್ಟಿ ಹಲವು ದಿನಗಳಾದರೂ ಅದಕ್ಕೆ ಪುಷ್ಟಿ ಸಿಕ್ಕಿದ್ದು ಇಂದು. ಸರ್ಕಾರಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಜೊತೆ ಯತೀಂದ್ರ ಕಾಣಿಸಿಕೊಂಡಿದ್ದು, ರಾಜಕೀಯ ವಲಯದಲ್ಲಿ ಯತೀಂದ್ರ ಪದಗ್ರಹಣಕ್ಕೆ ವೇದಿಕೆ ಸಿದ್ದವಾಗಿದೆ ಎಂಬ ಮಾತು ಕೇಳಿಬರ್ತಿದೆ.
ವರುಣಾ ಕ್ಷೇತ್ರದ ಮೆಲ್ಲಹಳ್ಳಿಗೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಸಿಎಂ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯ ಒಟ್ಟಿಗೆ ಕಾಣಿಸಿಕೊಂಡರು. ಪುತ್ರನನ್ನು ಜನತೆಗೆ ಪರಿಚಯಿಸಿಕೊಟ್ಟು ಬೆಂಬಲಿಸುವಂತೆ ಜನತೆಯನ್ನು ಮನವಿ ಮಾಡಿದರು. ಒಟ್ಟಿನಲ್ಲಿ ಮೈಸೂರಿನಲ್ಲಿ ತಮ್ಮ ಎರಡನೇ ಮಗನನ್ನು ರಾಜಕೀಯವಾಗಿ ಬೆಳಸಲು ಸಿಎಂ ಹೆಜ್ಜೆ ಇಟ್ಟಿರೊಂತು ಸತ್ಯ. ಇದಕ್ಕೆ ಮುಂದಿನ ಚುನಾವಣೆಯಲ್ಲಿಯೇ ಉತ್ತರ ಸಿಗಲಿದೆ.
