ರಾಜ್ಯದ ಸಿಎಂ ಸಿದ್ದುನಾ, ಹೆಚ್ಡಿಕೆನಾ
- ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ 206ರ ಕಚೇರಿಯಲ್ಲಿ ಹಳೆಯ ಹೆಸರು
- ನಿಯಮ ಪ್ರಕಾರ ಸಿಎಂ ಬದಲಾದ ತಕ್ಷಣ ಹೆಸರು ಬದಲಾಯಿಸಬೇಕು
ಬೆಂಗಳೂರು[ಜೂ.13]: ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ 20 ದಿನಗಳು ಕಳೆದಿವೆ. ಮಂತ್ರಿಮಂಡಲವು ರಚನೆಯಾಗಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ 206ರ ಕಚೇರಿಯಲ್ಲಿ ಸಿದ್ದರಾಮಯ್ಯವನರು ಇನ್ನು ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲಿನ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಎಂಬ ಭಾವಚಿತ್ರ ಇನ್ನು ಹಾಕಲಾಗಿದೆ.
ನಿಯಮ ಪ್ರಕಾರ ಸಿಎಂ ಆಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ನಂತರ ಹೆಚ್ ಡಿಕೆ ಭಾವಚಿತ್ರ ಹಾಕಬೇಕು. ಆದರೆ ಇನ್ನು ಫೋಟೊ ಇನ್ನು ಹಾಕಲಾಗಿಲ್ಲ. ರಾಜ್ಯ ಚುನಾವಣೆಯ ಫಲಿತಾಂಶ ಮೇ.15ರಂದು ಪ್ರಕಟಗೊಂಡು ಮೇ. 23ರಂದು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಪರವಾಗಿ ಮುಖ್ಯಮಂತ್ರಿಯಾಗಿ ಹೆಚ್ಡಿಕೆ ಪ್ರಮಾಣ ವಚನ ಸ್ವೀಕರಿಸಿದರು.