'ಗಾಳ ಹಾಕುತ್ತಿರುವ ಬಗ್ಗೆ ತಿಳಿಯಲು ನಮ್ಮ ಒಬ್ಬ ಶಾಸಕನನ್ನು ನಾನೇ ಕಳಿಸಿದ್ದೇನೆ’
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಿಜೆಪಿ ಗಾಳ ಹಾಕುತ್ತಿರುವ ಬಗ್ಗೆ ಸಾಕ್ಷಿ ಇದ್ದು, ಬಿಎಸ್ ವೈ ಏನೇನು ಮಾತನಾಡುತ್ತಾರೆ ಎಂದು ತಿಳಿದುಕೊಳ್ಳುವುದಕ್ಕೆ ನಾಗಮಂಗಲ ಶಾಸಕ ಸುರೇಶ್ ಗೌಡರನ್ನು ತಾವೇ ಕಳುಹಿಸಿದ್ದು, ಅವರು ಮಾತನಾಡಿರುವುದು ಮೊಬೈಲ್ ನಲ್ಲಿ ದಾಖಲಾಗಿದೆ ಎಂದು ಕಮಲ ಪಕ್ಷದ ವಿರುದ್ಧ ಹರಿಹಾಯ್ದರು.
- ಹಾಸನದಲ್ಲಿ ಬಿಜೆಪಿ ನಾಯಕರಿಗೆ ಸಿಎಂ ಕುಮಾರಸ್ವಾಮಿ ಎಚ್ಚರಿಕೆ
- "ನಾಗಮಂಗಲ ಶಾಸಕ ಸುರೇಶ್ ಗೌಡರನ್ನು ಕಳುಹಿಸಿದ್ದು ನಾನೇ"
- "ಯಡಿಯೂರಪ್ಪ ಏನೇನು ಹೇಳುತ್ತಾರೆ ಕೇಳಿ ಎಂದು ಕಳುಹಿಸಿದ್ದೆ"
- "ಅವರು ಮಾತನಾಡಿರುವುದು ಮೊಬೈಲ್ ನಲ್ಲಿ ದಾಖಲಾಗಿದೆ" -HDK