ಸೋಶಿಯಲ್ ಮೀಡಿಯಾ ಪೋಸ್ಟ್’ವೊಂದು ವಿಭಿನ್ನ ಕೋಮುಗಳ ನಡುವೆ ಘರ್ಷಣೆಗೆ ಕಾರಣವಾಗಿರುವ ಘಟನೆ ಉತ್ತರಾಖಂಡದ ಗಡ್ವಾಲ್ ಜಿಲ್ಲೆಯ ಸತ್ಪೌಲ್ ಪಟ್ಟಣದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕನೊಬ್ಬ ಪ್ರಾರ್ಥನ ಮಂದಿರವನ್ನು ಅವಹೇಳನ ಮಾಡುವ ಫೋಟೋವನ್ನು ಫೇಸ್ಬುಕ್,ನಲ್ಲಿ ಪೋಸ್ಟ್ ಮಾಡಿದ್ದು ಘರ್ಷಣೆಗೆ ಕಾರಣವಾಗಿದೆ.

ಡೆಹ್ರಾಡೂನ್ (ಜು.10): ಸೋಶಿಯಲ್ ಮೀಡಿಯಾ ಪೋಸ್ಟ್’ವೊಂದು ವಿಭಿನ್ನ ಕೋಮುಗಳ ನಡುವೆ ಘರ್ಷಣೆಗೆ ಕಾರಣವಾಗಿರುವ ಘಟನೆ ಉತ್ತರಾಖಂಡದ ಗಡ್ವಾಲ್ ಜಿಲ್ಲೆಯ ಸತ್ಪೌಲ್ ಪಟ್ಟಣದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಅಪ್ರಾಪ್ತ ಬಾಲಕನೊಬ್ಬ ಪ್ರಾರ್ಥನ ಮಂದಿರವನ್ನು ಅವಹೇಳನ ಮಾಡುವ ಫೋಟೋವನ್ನು ಫೇಸ್ಬುಕ್,ನಲ್ಲಿ ಪೋಸ್ಟ್ ಮಾಡಿದ್ದು ಘರ್ಷಣೆಗೆ ಕಾರಣವಾಗಿದೆ.

ಪರಿಸ್ಥಿತಿಯು ಸೂಕ್ಷ್ಮವಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಸೂಪರಿಟೆಂಡೆಂಟ್ ಹಾಗೂ ಜಿಲ್ಲಾ ಮೆಜಿಸ್ಟ್ರೇಟ್ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.

ಇತ್ತೀಚೆಗೆ ಇದೇ ರೀತಿ ಅವಹೇಳನಕಾರಿ ಪೋಸ್ಟನ್ನು ಫೇಸ್ಬುಕ್’ನಲ್ಲಿ ಹಾಕಿದ್ದ ಹಿನ್ನೆಲೆಯಲ್ಲಿ ಎರಡು ಕೋಮುಗಳ ನಡುವೆ ಪಶ್ಚಿಮ ಬಂಗಾಳದಲ್ಲಿ ಗಲಭೆ ನಡೆದಿದೆ.