Asianet Suvarna News Asianet Suvarna News

ಹೊಟ್ಟೆ ತುಂಬಿಕೊಳ್ಳಲು ಬಡವರ ಬಡಿದಾಟ: ಇವರ ಅಸಹಾಯಕತೆಯೇ ಇವನ ಬಂಡವಾಳ

ಬಡವರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುವವರ ಅಸಲಿ ಆಟ ಈಗ ಬಯಲಾಗಿದೆ. ರಸ್ತೆ ಕಾಮಗಾರಿಗೆ ಕರಿಕಲ್ಲಿನ ಜಲ್ಲಿ ಕಲ್ಲು ಒಡೆಸಲು ಬಡವರನ್ನು ಬಳಸಿಕೊಂಡಿದ್ದಾನೆ. ಈ ಕೆಲಸದ ಮೇಲುಸ್ತುವಾರಿ ನೋಡಿಕೊಳ್ತಿರುವ ಈತನ ಹೆಸ್ರು ಪ್ರಭು ಅಂತ ಬೀದರ್​​ ಜಿಲ್ಲೆಯ ಮುಸ್ತಾಪೂರ ಗ್ರಾಮದ ಹೊರ ವಲಯದಲ್ಲಿ ಪ್ರಭು ಪ್ರಲಾಪ ಜೋರಾಗಿದ್ದು ಮಕ್ಕಳಿಗೆ 100 ರೂಪಾಯಿ ದೊಡ್ಡವರಿಗೆ 200 ರುಪಾಯಿ ಈತ ಕೂಲಿ ಕೊಡುತ್ತಾನಂತೆ.

Child Labour system In Bidar

ಬೀದರ್(ಫೆ.06): ಬಡವರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುವವರ ಅಸಲಿ ಆಟ ಈಗ ಬಯಲಾಗಿದೆ. ರಸ್ತೆ ಕಾಮಗಾರಿಗೆ ಕರಿಕಲ್ಲಿನ ಜಲ್ಲಿ ಕಲ್ಲು ಒಡೆಸಲು ಬಡವರನ್ನು ಬಳಸಿಕೊಂಡಿದ್ದಾನೆ. ಈ ಕೆಲಸದ ಮೇಲುಸ್ತುವಾರಿ ನೋಡಿಕೊಳ್ತಿರುವ ಈತನ ಹೆಸ್ರು ಪ್ರಭು ಅಂತ ಬೀದರ್​​ ಜಿಲ್ಲೆಯ ಮುಸ್ತಾಪೂರ ಗ್ರಾಮದ ಹೊರ ವಲಯದಲ್ಲಿ ಪ್ರಭು ಪ್ರಲಾಪ ಜೋರಾಗಿದ್ದು ಮಕ್ಕಳಿಗೆ 100 ರೂಪಾಯಿ ದೊಡ್ಡವರಿಗೆ 200 ರುಪಾಯಿ ಈತ ಕೂಲಿ ಕೊಡುತ್ತಾನಂತೆ.

ಇಲ್ಲಿ ಕ್ರಷರ್'​​ಗಳ ಸಂಖ್ಯೆ ಜಾಸ್ತಿ, ಆದರೆ ದುಬಾರಿ ಬೆಲೆ. ಹೀಗಾಗಿ ಕಡಿಮೆ ಬೆಲೆಗೆ ಸಿಗೋ ಕೂಲಿಗಳನ್ನು ಬಳಸಿಕೊಂಡು ಪ್ರಭು ರೀತಿಯ ಮನುಷ್ಯರು ಜೇಬು ತುಂಬಿಸಿಳ್ಳುತ್ತಿದ್ದಾರೆ. ದುರಂತ ಅಂದರೆ ಸುಮಾರು 50ಕ್ಕೂ ಹೆಚ್ಚು ಜನರಿರುವ ಈ ಕರಿಕಲ್ಲು ಗಣಿಗಾರಿಕೆಯಲ್ಲಿ 10ಕ್ಕೂ ಅಧಿಕ ಕಂದಮ್ಮಗಳು ಕೆಲಸ ಮಾಡುತ್ತಿದ್ದಾರೆ.

ಒಟ್ಟನಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಮಾನವ ಹಕ್ಕುಗಳ ನಿಯಮಗಳ ಉಲ್ಲಂಘನೆಯಾಗಿದೆ. ಮನುಷ್ಯರನ್ನು ಜೀತದಂತೆ ಬಳಸಿಕೊಳ್ಳಲಾಗುತ್ತಿದೆ. ಕುಬೇರರಾಗಲು ಅಡ್ಡದಾರಿ ಹಿಡಿದಿರುವ ಇಂತಹ ಖದೀಮರಿಗೆ ಬುದ್ಧಿ ಕಲಿಸಲು ಸಂಬಂಧಪಟ್ಟ ಇಲಾಖಾ ಸಿಬ್ಬಂದಿ ಮುಂದಾಗಬೇಕಿದೆ.

Follow Us:
Download App:
  • android
  • ios