ವಿಜಯ್ ಶಂಕರ್ ಅವರು 2014ರ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಪಕ್ಷವು ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ನೀಡಿ ಇವರಿಗೆ ಹಾಸನದಿಂದ ನೀಡಲಾಗಿತ್ತು.

ಮೈಸೂರು(ಅ.05): ಜಿಲ್ಲೆಯಲ್ಲಿ ಮುಂದಿನ ಚುನಾವಣೆಗೆ ಬಿಜೆಪಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಮಾಜಿ ಸಂಸದ ವಿಜಯ್ ಶಂಕರ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿರಿಯ ನಾಯಕರ ನಡವಳಿಕೆಯಿಂದ ವಿಜಯ್ ಶಂಕರ್ ಅಸಮಾಧಾನ'ಗೊಂಡಿದ್ದು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.ವಿಜಯ್ ಶಂಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಳ ಹಾಕಿದ್ದು, ಹೆಚ್. ವಿಶ್ವನಾಥ್ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಯಿದೆ. ವಿಜಯ್ ಶಂಕರ್ ಅವರು 2014ರ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಪಕ್ಷವು ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ನೀಡಿ ಇವರಿಗೆ ಹಾಸನದಿಂದ ನೀಡಲಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಎದುರು ಸ್ಪರ್ಧಿಸಿ ವಿಜಯ್ ಶಂಕರ್ ಸೋತಿದ್ದರು.

(ಸಂಗ್ರಹ ಚಿತ್ರ)