ಗಣ್ಯ ಮುಸ್ಲಿಮರ ಫೋನ್ ಕದ್ದಾಲಿಕೆ: ಕಾನೂನು ಕ್ರಮಕ್ಕೆ ಕೇಂದ್ರ ಚಿಂತನೆ
ವಿಶೇಷ ಸನ್ನಿವೇಶಗಳಲ್ಲಿ ಮಾತ್ರ ಗೃಹ ಸಚಿವಾಲಯದ ಅನುಮತಿ ಯೊಂದಿಗೆ ಮಾತ್ರ ದೂರವಾಣಿ ಕದ್ದಾಲಿಕೆಗೆ ಅವಕಾಶ ಇದೆ. ಹೀಗಾಗಿ ಫೋನ್ ಕದ್ದಾಲಿಕೆಯ ವೇಳೆ ಸೂಕ್ತ ವಾದ ನಿಯಮ ಪಾಲಿಸಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ನಟಿ ಸೇರಿದಂತೆ ಮುಸ್ಲಿಂ ಗಣ್ಯ ವ್ಯಕ್ತಿಗಳ ದೂರವಾಣಿ ಸಂಭಾಷಣೆ ಕದ್ದಾಲಿಕೆ ಮಾಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ನೆರವು ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ವಿಶೇಷ ಸನ್ನಿವೇಶಗಳಲ್ಲಿ ಮಾತ್ರ ಗೃಹ ಸಚಿವಾಲಯದ ಅನುಮತಿ ಯೊಂದಿಗೆ ಮಾತ್ರ ದೂರವಾಣಿ ಕದ್ದಾಲಿಕೆಗೆ ಅವಕಾಶ ಇದೆ. ಹೀಗಾಗಿ ಫೋನ್ ಕದ್ದಾಲಿಕೆಯ ವೇಳೆ ಸೂಕ್ತ ವಾದ ನಿಯಮ ಪಾಲಿಸಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.