Asianet Suvarna News Asianet Suvarna News

ಕೇಂದ್ರ ಸರ್ಕಾರ ಸಚಿವರ ನೇಮಕಾತಿಯನ್ನು ವಿಳಂಬ ಮಾಡುತ್ತಿದೆ: ಕೇಜ್ರಿ ಆರೋಪ

ಸಚಿವ ಸಂಪುಟಕ್ಕೆ ಇಬ್ಬರು ಸಚಿವರ ನೇಮಕಾತಿ ಮಾಡುವುದಕ್ಕೆ ಸಂಬಂಧಿಸಿದ ಫೈಲನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದ್ದು ದೆಹಲಿ ಸರ್ಕಾರದ ಕಾರ್ಯ ಕಲಾಪಗಳು ನಿಧಾನಗತಿಯಲ್ಲಿ ಸಾಗುತ್ತಿವೆಯೆಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

Centre delaying appointment of two new ministers  Arvind Kejriwal

ನವದೆಹಲಿ (ಮೇ.16): ಸಚಿವ ಸಂಪುಟಕ್ಕೆ ಇಬ್ಬರು ಸಚಿವರ ನೇಮಕಾತಿ ಮಾಡುವುದಕ್ಕೆ ಸಂಬಂಧಿಸಿದ ಫೈಲನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದ್ದು ದೆಹಲಿ ಸರ್ಕಾರದ ಕಾರ್ಯ ಕಲಾಪಗಳು ನಿಧಾನಗತಿಯಲ್ಲಿ ಸಾಗುತ್ತಿವೆಯೆಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೆಹಲಿ ಜನತೆ ನರಳುವುದು ಬೇಡ.  ಕಳೆದ 10 ದಿನಗಳಿಂದ ಫೈಲನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿದೆ.  ಇದರಿಂದಾಗಿ ಸಾಕಷ್ಟು ಕೆಲಸಗಳು ಹಾಗೆಯೇ ಉಳಿದಿವೆ.  ನಿಮಗೆ ದ್ವೇಷವಿರುವುದು ನಮ್ಮ ಮೇಲೆ.  ದೆಹಲಿ ಜನತೆ ಮೇಲೆ ಅದನ್ನು ಸಾಧಿಸಬೇಡಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಗೌತಮ್ ಹಾಗೂ ಗೆಹ್ಲಾಟ್ ನೇಮಕಾತಿ ಸಂಬಂಧಿಸಿದ ಫೈಲನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ. ಎಂದು ಸರ್ಕಾರದ ಉನ್ನತಾಧಿಕಾರಿಗಳು ಹೇಳಿದ್ದಾರೆ. ಗೃಹ ಇಲಾಖೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Latest Videos
Follow Us:
Download App:
  • android
  • ios