Asianet Suvarna News Asianet Suvarna News

ಜಯಾ ನಿಧನ: ಒಂದು ದಿನದ ಶೋಕಾಚರಣೆ ಘೋಷಿಸಿದ ಕೇಂದ್ರ

ಕರ್ನಾಟಕ ಸೇರಿದಂತೆ, ಪಕ್ಕದ ಪಾಂಡಿಚೇರಿ, ಕೇರಳ, ಉತ್ತರಾಖಂಡ ಹಾಗೂ ಬಿಹಾರ ರಾಜ್ಯಗಳೂ ಒಂದು ದಿನದ ಶೋಕಾಚರಣೆಯನ್ನು ಆಚರಿಸುತ್ತಿವೆ.

Centre Delares One Day Mourning as Mark of Respect to Jayalalithaa

ನವದೆಹಲಿ (ಡಿ.06): ತಮಿಳುನಾಡು ಮುಖ್ಯಮಂತ್ರಿ ಜಯಾಲಿತಾ ನಿಧನದ ಹಿನ್ನೆಲೆಯಲ್ಲಿ ಕೆಂದ್ರ ಸರ್ಕಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ.

ತಮಿಳುನಾಡು ಸರ್ಕಾರ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ  3 ದಿನ ರಜೆ ಘೋಷಿಸಿದೆ ಹಾಗೂ ರಾಜ್ಯದಲ್ಲಿ 7 ದಿನ ಶೋಕಾಚರಣೆ ನಡೆಯಲಿದೆ.

ಕರ್ನಾಟಕ ಸೇರಿದಂತೆ, ಪಕ್ಕದ ಪಾಂಡಿಚೇರಿ, ಕೇರಳ, ಉತ್ತರಾಖಂಡ ಹಾಗೂ ಬಿಹಾರ ರಾಜ್ಯಗಳೂ ಒಂದು ದಿನದ ಶೋಕಾಚರಣೆಯನ್ನು ಆಚರಿಸುತ್ತಿವೆ.

ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಬಾವುಟವನ್ನು ಅರ್ಧ ಮಟ್ಟಕ್ಕೆ ಹಾರಿಸಲು ಸೂಚನೆ ನೀಡಲಾಗಿದೆ.

ಚೆನ್ನೈನ ಪೋಯಸ್​​ ಗಾರ್ಡನ್‌‌ನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಾದ್ಯಂತ ಯಾವುದೇ ಭಾಗದಲ್ಲಿ 3 ದಿನ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ.

Follow Us:
Download App:
  • android
  • ios