ರೈತರ ಹೆಸರಿನಲ್ಲಿ ತಮಿಳುನಾಡಿಗೆ ಹರಿಯಿತು ಕಾವೇರಿ!
ಬೆಂಗಳೂರು(ಅ.04): ರೈತರ ಬೆಳೆಗಳಿಗೆ ನೀರು ಬಿಡಲು ಸರ್ಕಾರ ನಿರ್ಣಯಕೈಗೊಂಡ ಹಿನ್ನೆಲೆ ರಾತ್ರಿಯಿಂದಲೇ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಕೆಆರ್ಎಸ್, ಕಬಿನಿ. ಹೇಮಾವತಿ, ಹಾರಂಗಿ ಈ ನಾಲ್ಕೂ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದೆ.
-ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ 3,500 ಕ್ಯೂಸೆಕ್ ನೀರು ಬಿಡುಗಡೆ
-ಗೊರೂರು ಬಳಿಯಿರುವ ಹೇಮಾವತಿ ಡ್ಯಾಂ 1200 ಕ್ಯೂಸೆಕ್ ನೀರು ಬಿಡುಗಡೆ.
-ಹಾರಂಗಿ ಡ್ಯಾಂನಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.
-ಕೆಆರ್ಎಸ್ ಡ್ಯಾಂನಿಂದ 6856 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ಕರ್ನಾಟಕದ ನಾಲೆಗಳಿಗೆ 2856 ಕ್ಯೂಸೆಕ್ ನೀರು ಹರಿಸಲಾಗಿದ್ದು, ತಮಿಳುನಾಡಿನತ್ತ 4 ಸಾವಿರ ಕ್ಯೂಸೆಕ್ ನೀರಿನ ಹರಿದುಹೋಗುತ್ತಿದೆ.