ಬೆಂಗಳೂರು(ಅ.06): ಕಾವೇರಿ ಕೊಳ್ಳದ ವಸ್ತು ಸ್ಥಿತಿ ಅಧ್ಯಯನ ನಡೆಸಲು ಇಂದು ರಾಜ್ಯಕ್ಕೆ ತಜ್ಞರ ಸಮಿತಿ ಆಗಮಿಸಲಿದೆ. ಈ ತಂಡ 10 ದಿನಗಳ ಕಾವೇರಿಕೊಳ್ಳದಲ್ಲಿ ಅಧ್ಯಯನ ನಡೆಸಲಿದೆ. ಸರ್ಕಾರ ಕೂಡಾ ಈ ತಜ್ಞರ ತಂಡಕ್ಕೆ ಪೂರಕ ಮಾಹಿತಿ ನೀಡುವಂತೆ ಕೆಲ ಅಧಿಕಾರಿಳಿಗೆ ಸೂಚಿಸಿದ್ದಾರೆ.

ಕಾವೇರಿಯಕಷ್ಟನೋಡಲುಇಂದುಆಗಮಿಸಲಿದೆಕೇಂದ್ರತಂಡ

ಕರ್ನಾಟಕದ ವಾದಕ್ಕೆ ಮನ್ನಣೆ ನೀಡಿದ್ದ ಸುಪ್ರೀಂಕೋರ್ಟ್, ಕಾವೇರಿ ಕೊಳ್ಳದ ವಸ್ತುಸ್ಥಿತಿ ಅರಿಯಲು ಉಭಯ ರಾಜ್ಯಗಳಿಗೂ ತೆರಳಿ ಅಧ್ಯಯನ ನಡೆಯುವಂತೆ ಆದೇಶಿಸಿತ್ತು. ಈ ಆದೇಶ ಹಿನ್ನೆಲೆ ಇಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ತಜ್ಞರ ತಂಡ ರಾಜ್ಯಕ್ಕೆ ಆಗಮಿಸಲಿದೆ. ಈ ಜಲತಜ್ಞರ ತಂಡದಲ್ಲಿ ಯಾರೆಲ್ಲ ಇರುತ್ತಾರೆ? ಇಲ್ಲಿದೆ ವಿವರ:

ಇಂದುರಾಜ್ಯಕ್ಕೆತಾಂತ್ರಿಕಸಮಿತಿ

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ

CWC ಸದಸ್ಯ ಎಸ್. ಮಸೂದ್

ಕೃಷ್ಣ ಗೋದಾವರಿ ಕೊಳ್ಳದ ಮುಖ್ಯ ಎಂಜನೀಯರ್ ಆರ್.ಕೆ.ಗುಪ್ತಾ

ಕರ್ನಾಟಕ ಹಾಗೂ ತಮಿಳುನಾಡಿ ಮುಖ್ಯ ಕಾರ್ಯದರ್ಶಿಗಳು, ಇಲ್ಲವೇ ಅವರು ಸೂಚಿಸುವ ಪ್ರತಿನಿಧಿಗಳು

ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಪುದುಚೇರಿಯ ಮುಖ್ಯ ಎಂಜನಿಯರ್

ಈ ತಂಡ ಅಕ್ಟೋಬರ್ 7ರಿಂದ 17ರವರೆಗೆ ಉಭಯ ರಾಜ್ಯಗಳ ಕಾವೇರಿ ಕೊಳ್ಳಕ್ಕೆ ಭೇಟಿ ನೀಡಿ ಅಲ್ಲಿ ಅಧ್ಯಯನ ನಡೆಸಲಿದೆ. ಬಳಿಕ ಅಕ್ಟೋಬರ್ 17ಕ್ಕೆ ಸುಪ್ರೀಂ ಕೋರ್ಟ್ ಗೆ ಸಮಿತಿ ತನ್ನ ವರದಿ ಸಲ್ಲಿಸಲಿದೆ.

ಸಮಿತಿ ಆಗಮಿಸುತ್ತಿರುವ ಹಿನ್ನೆಲೆ ನಿನ್ನೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಾಯಿತು. ಈ ವೇಳೆ ಸಮಿತಿ ಪೂರಕ ಮಾಹಿತಿ ಒದಗಿಸುವಂತೆ ಸಿಎಂ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಅಲ್ಲದೆ ಹಿರಿಯ ಸಚಿವರಿಗೆ ಅಗತ್ಯ ಮಾಹಿತಿ ಒದಗಿಸಿಕೊಡಲು ಜವಾಬ್ದಾರಿಯಿಂದ ನೋಡಿಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.

ಒಟ್ಟಾರೆ ಈ ತಂಡಕ್ಕೆ ನಮ್ಮ ನಾಯಕರು ಕಾವೇರಿ ಕಷ್ಟವನ್ನು ಮನವರಿಕೆ ಮಾಡಿಕೊಡುತ್ತಾರೆ, ಸಮಿತಿಯು ಅಧ್ಯಯನ ನಡೆಸಿ ಸುಪ್ರೀಂಗೆ ಯಾವ ರೀತಿ ವರದಿ ಸಲ್ಲಿಸುತ್ತದೆ ಎಂಬುದನ್ನು ತಿಳಿಯಬೇಕಾದರೆ ಅಕ್ಟೋಬರ್ 18ರವರೆಗೆ ಕಾಯಲೇಬೇಕು.