Asianet Suvarna News Asianet Suvarna News

ಪೊಲೀಸರ ಸಮಯ ಪ್ರಜ್ಞೆ ಯಿಂದ ತಪ್ಪಿತು ಭಾರೀ ಅನಾಹುತ

ಪೊಲೀಸರ ಸಮಯ ಪ್ರಜ್ಞೆ ಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಕೂದಲೆಳೆ ಅಂತರದಿಂದ  ಆರು ಮಂದಿ ಪೇದೆಗಳು ಪಾರಾಗಿದ್ದಾರೆ.   ನಿನ್ನೆ ರಾತ್ರಿ 10:50 ರ ಸುಮಾರಿಗೆ ಎಲಿವೇಟೆಡ್ ರಸ್ತೆ ಸಂಚಾರ ನಿರ್ಬಂಧಿಸಿ ಟ್ರಾಫಿಕ್ ನಿಯಂತ್ರಣ ವೇಳೆ ಈ ಘಟನೆ ನಡೆದಿದೆ. 

cab hit to barricade in Yalahanka

ಬೆಂಗಳೂರು (ಜೂ. 06):  ಪೊಲೀಸರ ಸಮಯ ಪ್ರಜ್ಞೆ ಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಕೂದಲೆಳೆ ಅಂತರದಿಂದ  ಆರು ಮಂದಿ ಪೇದೆಗಳು ಪಾರಾಗಿದ್ದಾರೆ.   ನಿನ್ನೆ ರಾತ್ರಿ 10:50 ರ ಸುಮಾರಿಗೆ ಎಲಿವೇಟೆಡ್ ರಸ್ತೆ ಸಂಚಾರ ನಿರ್ಬಂಧಿಸಿ ಟ್ರಾಫಿಕ್ ನಿಯಂತ್ರಣ ವೇಳೆ ಈ ಘಟನೆ ನಡೆದಿದೆ. 

ವೇಗವಾಗಿ ಬಂದ ಕ್ಯಾಬ್, ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಬ್ಯಾರಿಕೇಡ್ ಡಿಕ್ಕಿ ಹೊಡೆದಿದೆ.  ಬ್ಯಾರಿಕೇಡ್ ಮುಂಭಾಗ ನಿಂತಿದ್ದ ಪೊಲೀಸರು ಪಕ್ಕಕ್ಕೆ ಜಿಗಿದು ಪಾರಾಗಿದ್ದಾರೆ.  ಯಲಹಂಕ ಎರ್ ಫೋರ್ಸ್‌ ಮುಂಭಾಗ ಟ್ರಾಫಿಕ್ ನಿಯಂತ್ರಿಸುವಾಗ ಈ ಘಟನೆ ನಡೆದಿದೆ. ಪೇದೆಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. 
 

Follow Us:
Download App:
  • android
  • ios