ಹೃದಯಾಘಾತ: ಬಸ್ಸಿನಲ್ಲೇ ಕಂಡಕ್ಟರ್ ಸಾವು
ಕರ್ತವ್ಯಕ್ಕೆ ಸಜ್ಜಾಗುತ್ತಿದ್ದ ವೇಳೆ ಹೃದಯಾಘಾತವಾಗಿ ಕಂಡಕ್ಟರ್ ಮೃತಪಟ್ಟಿರುವ ಘಟನೆ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಿಜಾಪುರ ಮೂಲದ ಹಿರೋ ಗೋಪಾಲ್ ರಾಠೋಡ್ (36)ಮೃತ ಪಟ್ಟ ಕಂಡಕ್ಟರ್.
ಚಾಮರಾಜನಗರ (ಸೆ. 24): ಕರ್ತವ್ಯಕ್ಕೆ ಸಜ್ಜಾಗುತ್ತಿದ್ದ ವೇಳೆ ಹೃದಯಾಘಾತವಾಗಿ ಕಂಡಕ್ಟರ್ ಮೃತಪಟ್ಟಿರುವ ಘಟನೆ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಿಜಾಪುರ ಮೂಲದ ಹಿರೋ ಗೋಪಾಲ್ ರಾಠೋಡ್ (36)ಮೃತ ಪಟ್ಟ ಕಂಡಕ್ಟರ್. ಬೆಳಗಿನ ಟ್ರಿಪ್ ಗೆ ಬಸ್ಸಿನಲ್ಲಿ ತಯಾರಾಗುತ್ತಿದ್ದ ವೇಳೆ ತೀವ್ರ ಹೃದಯಾಘಾತ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರೊಬೆಷನರಿ ಅವಧಿಯಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಸಚಿವ ಪುಟ್ಟರಂಗಶೆಟ್ಟಿ ಭೇಟಿ ನೀಡಿದ್ದಾರೆ.
-ಸಾಂದರ್ಭಿಕ ಚಿತ್ರ