ಶಿವರಾಮಕಾರಂತ್ ಬಡಾವಣೆ ಪ್ರಕರಣ: ನಾಳೆ ಬಿಎಸ್'ವೈ ನಿರ್ಣಾಯ ದಿನ
ಶಿವರಾಮಕಾರಂತ್ ಬಡಾವಣೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನಾಳೆ ನಿರ್ಣಾಯ ದಿನ.
ಬೆಂಗಳೂರು (ಸೆ.21): ಶಿವರಾಮಕಾರಂತ್ ಬಡಾವಣೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನಾಳೆ ನಿರ್ಣಾಯ ದಿನ.
ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ರಿಟ್ ಅರ್ಜಿಯ ಮಧ್ಯಂತರ ಆದೇಶ ಹೊರಬೀಳಲಿದೆ. 257 ಎಕರೆ ಭೂಮಿಯನ್ನ ಡಿನೋಟಿಫಿಕೇಷನ್ ಆರೋಪ ಎದುರಿಸುತ್ತಿದ್ದು, ಬಿಎಸ್ವೈ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಎಸಿಬಿ ಹೈಕೋರ್ಟ್ನಲ್ಲಿ ವಾದಿಸಿದೆ. ಆದರೆ ಯಡಿಯೂರಪ್ಪ ಪರ ವಕೀಲರು ಇದೊಂದು ರಾಜಕೀಯ ದುರುದ್ದೇಶಪೂರಿತ ಪ್ರಕರಣ. ಬಿಎಸ್ವೈ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ. ಸತತ ಎರಡು ವಾರಗಳ ಕಾಲ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಇಂದು ಮಧ್ಯಂತರ ಅರ್ಜಿಯ ಆದೇಶ ಪ್ರಕಟಿಸಲಿದೆ.