ಶಿವರಾಮಕಾರಂತ್​​ ಬಡಾವಣೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್​​.ಯಡಿಯೂರಪ್ಪಗೆ ನಾಳೆ ನಿರ್ಣಾಯ ದಿನ.

ಬೆಂಗಳೂರು (ಸೆ.21): ಶಿವರಾಮಕಾರಂತ್​​ ಬಡಾವಣೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್​​.ಯಡಿಯೂರಪ್ಪಗೆ ನಾಳೆ ನಿರ್ಣಾಯ ದಿನ.

ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಎಫ್​ಐಆರ್​ ರದ್ದು ಕೋರಿ ಸಲ್ಲಿಸಿರುವ ರಿಟ್​ ಅರ್ಜಿಯ ಮಧ್ಯಂತರ ಆದೇಶ ಹೊರಬೀಳಲಿದೆ. 257 ಎಕರೆ ಭೂಮಿಯನ್ನ ಡಿನೋಟಿಫಿಕೇಷನ್​ ಆರೋಪ ಎದುರಿಸುತ್ತಿದ್ದು, ಬಿಎಸ್​ವೈ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಎಸಿಬಿ ಹೈಕೋರ್ಟ್​​ನಲ್ಲಿ ವಾದಿಸಿದೆ. ಆದರೆ ಯಡಿಯೂರಪ್ಪ ಪರ ವಕೀಲರು ಇದೊಂದು ರಾಜಕೀಯ ದುರುದ್ದೇಶಪೂರಿತ ಪ್ರಕರಣ. ಬಿಎಸ್​ವೈ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ. ಸತತ ಎರಡು ವಾರಗಳ ಕಾಲ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್​ ಇಂದು ಮಧ್ಯಂತರ ಅರ್ಜಿಯ ಆದೇಶ ಪ್ರಕಟಿಸಲಿದೆ.