ಬಿಎಂಟಿಸಿ ಸಿಲಿಕಾನ್​ ಸಿಟಿ ಬೆಂಗಳೂರಿನ ನರನಾಡಿ. ಆದರೆ ಇದೇ ಬಿಎಂಟಿಸಿ ಬಸ್​ಗಳಿಗೆ ಕಿಲ್ಲರ್ ಬಿಎಂಟಿಸಿ ಎಂಬ ಕುಖ್ಯಾತಿಯೂ ಇದೆ. ಬಹುತೇಕ ಬಾರಿ ಬಿಎಂಟಿಸಿ ಬಸ್​ಗಳ ಅಪಘಾತಕ್ಕೆ ಚಾಲಕರನ್ನು ಹೊಣೆ ಮಾಡಲಾಗುತ್ತೆ ಆದ್ರೆ ದುರಂತಗಳು ಸಂಭವಿಸುವುದ ಹಿಂದೆ ಕಾಣದ ಕೈಗಳಿವೆ. ಆ ಕರಳಮುಖ ಸುವರ್ಣನ್ಯೂಸ್​ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಆ EXVCLUSIVE ರಿಪೋರ್ಟ್​ ಇಲ್ಲಿದೆ ನೋಡಿ

ಬೆಂಗಳೂರು(ಸೆ.14): ಎದೆ ಝಲ್​ ಎನಿಸುವ ಈ ಅಪಘಾತಗಳೇ ಬಿಎಂಟಿಸಿ ಬಸ್​ಗಳಿಗೆ ಕಿಲ್ಲರ್​​​​​​​​​​​​​ ಎಂಬ ಹಣೆ ಪಟ್ಟಿಯನ್ನು ಕೊಟ್ಟಿವೆ. ಬ್ರೇಕ್​ ಫೇಲ್​, ಅಗ್ನಿ ಅವಘಡ, ಅಪಘಾತಗಳಿಗೆ ಅದೆಷ್ಟೋ ಪ್ರಯಾಣಿಕರು, ಪಾದಚಾರಿಗಳು ಬಲಿಯಾಗಿ ಹೋಗಿದ್ದಾರೆ. ಈ ದುರಂತಗಳ ಹಿಂದೆ ಇರೋದು ಭ್ರಷ್ಟಚಾರ. ಭಷ್ಟ್ರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಪ್ರಾಣ ತೆತ್ತುತ್ತಿದ್ದಾರೆ. ದಿನ ಒಂದಕ್ಕೇ ಹತ್ತರಿಂದ ಹದಿನೈದು ರಸ್ತೆ ಅಪಘಾತಗಳು ಸಂಭವಿಸುತ್ತವೆ ಅಂದರೆ ನೀವು ನಂಬಲೇಬೇಕು.

ತಪಾಸಣೆ ಆಗದೆಯೇ ರಸ್ತೆಗಿಳಿಯುತ್ತಿವೆ ಕಿಲ್ಲರ್​ BMTC ಬಸ್​ಗಳು!

BMTC ಬಸ್​ಗಳ ವಾಹನ ಪರೀಕ್ಷಕ ಹಾಗೂ ಘಟಕ ವ್ಯವಸ್ಥಾಪಕರ ನಿರ್ಲಕ್ಷ್ಯದಿಂದಲೇ ಬಿಎಂಟಿಸಿ ಬಸ್​ಗಳು ಕಿಲ್ಲರ್​ ಹಣೆಪಟ್ಟಿ ಹೊತ್ತಿವೆ. ಆಯಾ ಡಿಪೋಗಳ ವಾಹನ ಪರೀಕ್ಷಕರು, ಬಸ್​ ದುರಸ್ತಿಗೊಳಿಸಿದ ಅಧಿಕಾರಿ ಹಾಗೂ ಘಟಕ ವ್ಯವಸ್ಥಾಪಕ ಬಸ್​ನ ಪರಿಶೀಲಿಸಿ, ಲಾಗ್​ ಬುಕ್​​ಗೆ ಸಹಿ ಹಾಕಿ ನಂತರವಷ್ಟೇ ಬಸ್​ ರಸ್ತೆಗೆ ಇಳಿಸಬೇಕು. ಆದ್ರೆ, ಇವತ್ತು ಬೆಂಗಳೂರಿನಲ್ಲಿ ಓಡಾಡೋ ಯಾವ ಬಿಎಂಟಿಸಿ ಬಸ್​​ನಲ್ಲೂ ಈ ಮೂವರು ಸಹಿ ಹಾಕಿರುವ ಲಾಗ್​ ಶೀಟ್​ ಇಲ್ಲ. ​ ಲಾಗ್​ ಶಿಟ್​ ಇದ್ರೂ ಅದರಲ್ಲಿ ಇವರ ಸಹಿ ಇರುವುದಿಲ್ಲ. ಸುವರ್ಣ ನ್ಯೂಸ್​ ರಿಯಾಲಿಟಿ ಚೆಕ್​'ನಲ್ಲಿ ಡಿಪೋ ಅಧಿಕಾರಿಗಳ ಅಸಲಿಯತ್ತು ಹೊರ ಬಿದ್ದಿದೆ. 

ಡಿಪೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇಲಿಂದ ಮೇಲೆ ದುರಂತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಈಗ್ಲಾದ್ರೂ ಸಾರಿಗೆ ಸಚಿವರು ಎಚ್ಚೆತ್ತು ತಮ್ಮ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಅವ್ಯವಸ್ಥೆಯನ್ನ ಸರಿಪಡಿಸಬೇಕಿದೆ. ಇಲ್ಲವಾದಲ್ಲಿ BMTC ಬಸ್​ ಹತ್ತುವ ಮುನ್ನ ಎಚ್ಚರ.