ಅಂತೂ ಇಂತೂ ಬಿಎಂಟಿಸಿ ನಿಗಮ ಎಚ್ಚೆತ್ತುಕೊಂಡಿದೆ. ಪದೇ ಪದೇ ಬಿಎಂಟಿಸಿ ಬಸ್​ಗಳಿಂದ ಆಗುತ್ತಿರುವ ಮುಖಭಂಗವನ್ನ ತಪ್ಪಿಸಿಕೊಳ್ಳಲು ಬಿಎಂಟಿಸಿ ನಿಗಮ ಮುಂದಾಗಿದೆ.

ಬೆಂಗಳೂರು (ಸೆ.19): ಅಂತೂ ಇಂತೂ ಬಿಎಂಟಿಸಿ ನಿಗಮ ಎಚ್ಚೆತ್ತುಕೊಂಡಿದೆ. ಪದೇ ಪದೇ ಬಿಎಂಟಿಸಿ ಬಸ್​ಗಳಿಂದ ಆಗುತ್ತಿರುವ ಮುಖಭಂಗವನ್ನ ತಪ್ಪಿಸಿಕೊಳ್ಳಲು ಬಿಎಂಟಿಸಿ ನಿಗಮ ಮುಂದಾಗಿದೆ.

ಕಳೆದ ತಿಂಗಳು ಪೀಣ್ಯಾ ಬಳಿ ವೇಗವಾಗಿ ಹೋಗುತ್ತಿದ್ದ ಬಸ್​ನ ಚಕ್ರ ಕಳಚಿ ಬಿದ್ದ ಘಟನೆ ನಡೆದಿತ್ತು, ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಬಸ್​ ಕೂಡಾ ಮಾರ್ಗ ಮಧ್ಯೆಯೇ ಕೈಕೊಟ್ಟಿತ್ತು. ಇದಕ್ಕೆ ಕಾರಣ ಏನು ಎಂಬುವುದರ ಬಗ್ಗೆ ಸುವರ್ಣನ್ಯೂಸ್​ ಸವಿಸ್ತಾರವಾದ ಸುದ್ದಿಯನ್ನ ಪ್ರಸಾರ ಮಾಡಿತ್ತು . ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಬಿಎಂಟಿಸಿ ನಿಗಮ ಎಂಟು ವರ್ಷ ಪೂರೈಸಿದ ಬಿಎಂಟಿಸಿ ಬಸ್​ಗಳನ್ನ ರಸ್ತೆಗೆ ಇಳಿಸದಿರಲು ಬಿಎಂಟಿಸಿ ಮುಂದಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್​ಗಳು ಎಂಟು ವರ್ಷ ಪೂರೈಸಿದ್ದು ಅವುಗಳನ್ನ ಗುಜರಿಗೆ ಹಾಕಲು ಬಿಎಂಟಿಸಿ ಮುಂದಾಗಿದೆ. ಇದು ಸುವರ್ಣನ್ಯೂಸ್​ ಇಂಪ್ಯಾಕ್ಟ್​!

ವೇಗವಾಗಿ ಚಲಿಸುತ್ತಿದ್ದ ಬಸ್​ ಚಕ್ರ ಕಳಚಿ ಬಿದ್ದು ಕೂದಲಂತರದಲ್ಲಿ ಭಾರಿ ಅವಘಡ ತಪ್ಪಿತ್ತು, ಇದಾದ ನಂತರ ನಿನ್ನೆ ಕೂಡಾ ವೇಗವಾಗಿ ಚಲಿಸುತ್ತಿದ್ದ ಬಸ್​ ಚಕ್ರ ಕಳಚಿದೆ. ಹೀಗಾಗಿ ಇನ್ಮುಂದೆ ಎಂಟು ವರ್ಷಕ್ಕಿಂತ ಮೇಲ್ಪಟ್ಟ ಬಸ್​ಗಳನ್ನ ರಸ್ತೆಗೆ ಇಳಿಸುವುದಿಲ್ಲ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್​ ಸುವರ್ಣನ್ಯೂಸ್​ಗೆ ತಿಳಿಸಿದ್ದಾರೆ..