Asianet Suvarna News Asianet Suvarna News

‘ಮೈತ್ರಿ ಸಚಿವರಿಂದ ಅತೃಪ್ತರಿಗಿದೆ ಈ ಬೆದರಿಕೆ : ಇದು ಶೋಭೆಯಲ್ಲ’

ಮೈತ್ರಿ ಸಚಿವರಿಂದ ಅತೃಪ್ತರಾಗಿ ಹೊರ ನಡೆದಿರುವವರಿಗೆ ಈ ಬೆದರಿಕೆ ಇಂತಹದ್ದೊಂದು ಬೆದರಿಕೆ ಇದ್ದು, ಇದು ಸೂಕ್ತ ನಡೆಯಲ್ಲ. ಹೀಗೆಂದು ಬಿಜೆಪಿ ನಾಯಕರೋರ್ವರು ಹೇಳಿದ್ದಾರೆ. 

BJP Well come Supreme Court Verdict Over Karnataka Political Crisis Says Srinivas Poojary
Author
Bengaluru, First Published Jul 17, 2019, 1:54 PM IST

ಬೆಂಗಳೂರು [ಜು.17] : ಕರ್ನಾಟಕ ರಾಜಕೀಯ ಪ್ರಹಸನದ ಬಗ್ಗೆ ಸುಪ್ರೀಂ ಕೋರ್ಟ್ ನಿಂದ ಪ್ರಕಟವಾದ ಮಹತ್ವದ ತೀರ್ಪನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸ್ವಾಗತಿಸಿದ್ದಾರೆ. 

ವಿಶ್ವಾಸಮತಕ್ಕೆ ಆಗಮಿಸಲು ಅತೃಪ್ತರಿಗೆ ಒತ್ತಡ ಹೇರಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸದನದಲ್ಲಿ ಬಿಜೆಪಿ ಬಹುಮತ ಹೊಂದಲು ಅವಕಾಶ ಇದೆ ಎಂದು ಪೂಜಾರಿ ಹೇಳಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೈತ್ರಿ ಸರ್ಕಾರದ ಸಚಿವರು ಅತೃಪ್ತ ಶಾಸಕರನ್ನು ಅನರ್ಹ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ರೀತಿಯಾಗಿ ಒತ್ತಡ ಹೇರುವುದು ಸಚಿವ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು. 

ಮೈತ್ರಿ ಸರ್ಕಾರ ಪತನದ ಅಂಚಿನಲ್ಲಿ ಇದ್ದು, ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Follow Us:
Download App:
  • android
  • ios