ಮಧ್ಯ ಕರ್ನಾಟಕದ ದಾವಣಗೆರೆ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ಈಗ ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಕದನ ನಡೆಯುತ್ತಿದೆ. ರಾಜಕಾರಣದ ಜತೆಗೆ ಇಲ್ಲಿ ಸಂಬಂಧಿಕರ ನಡುವೆ ಹಣಾಹಣಿಯೂ ಇದ್ದು, ಪ್ರತಿ ಚುನಾವಣೆಯಲ್ಲೂ ಕುತೂಹಲ ಕೆರಳಿಸುತ್ತದೆ.

ದಾವಣಗೆರೆ : ಮಧ್ಯ ಕರ್ನಾಟಕದ ದಾವಣಗೆರೆ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ಈಗ ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಕದನ ನಡೆಯುತ್ತಿದೆ. ರಾಜಕಾರಣದ ಜತೆಗೆ ಇಲ್ಲಿ ಸಂಬಂಧಿಕರ ನಡುವೆ ಹಣಾಹಣಿಯೂ ಇದ್ದು, ಪ್ರತಿ ಚುನಾವಣೆಯಲ್ಲೂ ಕುತೂಹಲ ಕೆರಳಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ, ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್ಸಿನ ಪ್ರಭಾವಿ ನಾಯಕರು. ಅವರಿಗೆ ಬಿಜೆಪಿಯಿಂದ ಎದುರಾಳಿಯಾಗಿರುವವರು ಸಂಬಂಧದಲ್ಲಿ ಬೀಗರೇ ಆಗಿರುವ ಸಂಸದ ಜಿ.ಎಸ್. ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್. ಎರಡೂ ಪಕ್ಷಗಳಿಗೆ ಸಂಬಂಧಿಕರಿಗೇ ಸಾರಥಿಗಳಾಗಿರುವುದರಿಂದ ಇದೊಂದು ರೀತಿ ಕುಟುಂಬಗಳ ನಡುವಣ ರಾಜಕೀಯ ಕದನ.

ಒಂದು ಕಾಲದಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿ ಗೆಲ್ಲುತ್ತಿತ್ತು. 2008ರಲ್ಲಿ ಚಿತ್ರಣ ಬದಲಾಯಿತು. 27ಕ್ಕೆ ಮೋದಿ ಅವರು ದಾವಣಗೆರೆ ಬರುತ್ತಿದ್ದಾರೆ. ಅಸ್ತಿತ್ವ ಸಾಬೀತಿಗೆ ಜೆಡಿಎಸ್ ಹೋರಾಡುತ್ತಿದೆ.