Asianet Suvarna News Asianet Suvarna News

ಬಿಜೆಪಿ ರಥಯಾತ್ರೆಗೆ ದೀದಿ ಸರ್ಕಾರದ ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್‌

ಬಿಜೆಪಿ ರಥಯಾತ್ರೆ: ಬಂಗಾಳ ಸರ್ಕಾರದ ಅಭಿಪ್ರಾಯ ಕೇಳಿದ ಸುಪ್ರೀಂಕೋರ್ಟ್‌

BJP rath yatra in West Bengal Supreme Court seeks Mamata government s response
Author
Kolkata, First Published Jan 9, 2019, 9:56 AM IST

ನವದೆಹಲಿ[ಜ.09]: ಬಂಗಾಳದಲ್ಲಿ ಬಿಜೆಪಿ ನಡೆಸಲು ಉದ್ದೇಶಿಸಿರುವ ರಥಯಾತ್ರೆ ಸಂಬಂಧ, ಸುಪ್ರೀಂಕೋರ್ಟ್‌ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಅಭಿಪ್ರಾಯ ಕೋರಿದೆ.

ಈ ಹಿಂದೆ ಕೋಮುಗಲಭೆ ಸಂಭವಿಸುವ ಕಾರಣ ನೀಡಿ, ಮಮತಾ ಸರ್ಕಾರ, ಅಮಿತ್‌ ಶಾ ನೇತೃತ್ವದಲ್ಲಿ ಬಿಜೆಪಿ ನಡೆಸಲು ಉದ್ದೇಶಿಸಿದ್ದ ರಥಯಾತ್ರೆಗೆ ಅನುಮತಿ ನಿರಾಕರಿಸಿತ್ತು. ಇದನ್ನು ರಾಜ್ಯ ಹೈಕೋರ್ಟ್‌ ಕೂಡಾ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಅನುಮತಿ ಕೋರಿ ಸುಪ್ರೀಂಕೋರ್ಟ್‌ ಕದ ಬಡಿದಿತ್ತು.

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರದಿಂದ ಅನುಮತಿ ಕೋರಿ, ವಿಚಾರಣೆಯನ್ನು ಜ.15ಕ್ಕೆ ಮುಂದೂಡಿತು

Follow Us:
Download App:
  • android
  • ios