ಬಿಜೆಪಿ ಶಾಸಕ ರಾಜು ಕಾಗೆ ಕುಟುಂಬದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಶಾಸಕ ರಾಜು ಕಾಗೆ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಭೀಮಾಶಂಕರ ಗ್ರಾಮದಲ್ಲಿ 13 ಆರೋಪಿಗಳ ಪೈಕಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು(ಜ.19): ಬಿಜೆಪಿ ಶಾಸಕ ರಾಜು ಕಾಗೆ ಕುಟುಂಬದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಶಾಸಕ ರಾಜು ಕಾಗೆ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಭೀಮಾಶಂಕರ ಗ್ರಾಮದಲ್ಲಿ 13 ಆರೋಪಿಗಳ ಪೈಕಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಸಕ ರಾಜುಕಾಗೆ, ಅವರ ಪುತ್ರಿ ಶೋಭಾ ಕಾಗೆ, ಸಹೋದರ ಶಿವಗೌಡ ಕಾಗೆ, ಶಿವಗೌಡ ಕಾಗೆ ಪತ್ನಿ ಹಾಗೂ ರಾಜು ಕಾಗೆ ಚಾಲಕ ನನ್ನು ಬಂಧಿಸಲಾಗಿದೆ. ಜನವರಿ 1 ರಂದು ಕಾಂಗ್ರೆಸ್ ಕಾರ್ಯಕರ್ತ ವಿವೇಶ್ ಶೆಟ್ಟಿ ಮನೆಗೆ ನುಗ್ಗಿದ ಶಾಸಕ ರಾಜುಕಾಗೆ ಪಟಾಲಂ, ವಿವೇಕ್ ಶೆಟ್ಟಿಯನ್ನು ಮನಬಂದಂಥೆ ಥಳಿಸಿತ್ತು. 

ಈ ಪ್ರಕರಣ ಸಂಬಂಧ ಶಾಸಕ ರಾಜು ಕಾಗೆ ಸೇರಿದಂತೆ 13 ಆರೋಪಿಗಳ ವಿರುದ್ಧ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ 10 ದಿನಗಳ ಬಳಿಕ 13 ಆರೋಪಿಗಳ ಪೈಕಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.