ರಕ್ಷಾ ಬಂಧನದ ದಿನ ಅಣ್ಣಂದಿರಿಗೆ ರಾಖಿ ಕಟ್ಟುವುದು ಸಹಜ. ಆದರೆ ಬಿಜೆಪಿ ಶಾಸಕರೋರ್ವರು ಗೋವಿಗೆ ರಾಖಿ ಕಟ್ಟಿದ್ದಾರೆ. 

ಲಕ್ನೋ [ಆ.16]: ಅಣ್ಣ-ತಂಗಿಯರ ಸಂಬಂಧ ಬೆಸೆಯುವ ಹಿಂದೂಗಳ ಸಾಂಪ್ರದಾಯಿಕ ಹಬ್ಬ ರಕ್ಷಾ ಬಂಧನದ ದಿನ ಸೋದರಿಯರು ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಭುಕಲ್‌ ನವಾಜ್‌ ರಕ್ಷಾ ಬಂಧನದ ಪ್ರಯುಕ್ತ ಗೋವಿಗೆ ಪೂಜೆ ಸಲ್ಲಿಸಿ ರಾಖಿ ಕಟ್ಟಿದರು. 

ಲಖನೌನ ಕುಬಿಯಾಘಾಟ್‌ನಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಮಹಿಳೆಯರು ಮತ್ತು ಪುರುಷರು ಗೋವುಗಳಿಗೆ ರಾಖಿ ಕಟ್ಟಿದರು. ಅಲ್ಲದೆ, ಮಾಂಸಕ್ಕಾಗಿ ಗೋವುಗಳ ವಧೆ ಮಾಡುವುದರ ತಡೆ ಮತ್ತು ಗೋವು ಹಾಗೂ ಮನುಷ್ಯನ ನಡುವಿನ ಬಾಂಧವ್ಯದ ಜಾಗೃತಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರಂತೆ.