ಬಿಜೆಪಿ ಕಚೇರಿ ಮೇಲೆ ಟಿಎಂಸಿ ದಾಳಿ; ಸುದೀಪ್ ಬಂಧೋಪಾಧ್ಯಾಯ ಬಂಧನಕ್ಕೆ ದೀದಿ ಗರಂ
ಕಲ್ಕತ್ತಾದ ಬಿಜೆಪಿ ಮುಖ್ಯಕಚೇರಿ ಮೇಲೆ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಗಳು ದಾಳಿ ನಡೆಸಿದ್ದು, ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಧೋಪಾಧ್ಯಾಯರನ್ನು ಬಂಧಿಸಲಾಗಿದೆ.
ನವದೆಹಲಿ (ಜ.02): ಕಲ್ಕತ್ತಾದ ಬಿಜೆಪಿ ಮುಖ್ಯಕಚೇರಿ ಮೇಲೆ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಗಳು ದಾಳಿ ನಡೆಸಿದ್ದು, ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಧೋಪಾಧ್ಯಾಯರನ್ನು ಬಂಧಿಸಲಾಗಿದೆ.
ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಗುಂಪುಗಳ ನಡುವೆ ಬಿಜೆಪಿ ಕಚೇರಿ ಎದುರು ಘರ್ಷಣೆ ನಡೆದಿದೆ. ಗಲಾಟೆ ತಡೆಯಲು ಪೋಲಿಸರು ಸ್ಥಳಕ್ಕೆ ಆಗಮಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ.ಬಂ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಿಬಿಐ, ಇಡಿ, ಐಟಿ ಪಡೆಗಳು ನೋಟು ಅಮಾನ್ಯದ ಬಗ್ಗೆ ಧ್ವನಿ ಎತ್ತಲು ಹೆದರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದಿದ್ದಾರೆ. ಸುದೀಪ್ ಬಂಡೋಪಾಧ್ಯಾಯರನ್ನು ಬಂಧಿಸಿರುವುದನ್ನು ಖಂಡಿಸಿ ದೈರ್ಯವಿದ್ದರೆ ನನ್ನನ್ನು ಬಂಧಿಸಲಿ ಎಂದು ಗುಡುಗಿದ್ದಾರೆ.