ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಜನರಕ್ಷಾ ಯಾತ್ರೆ: ಪ್ರತಿ ದಿನ ಒಬ್ಬ ಫೈರ್ ಬ್ರಾಂಡ್ ನಾಯಕರ ಪಾಠ
ಕೇರಳ ಮಾದರಿಯಲ್ಲಿ ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ನಡೆಸಲಿದೆ. ಪರಿವರ್ತನಾ ಯಾತ್ರೆಗೆ ಜನರಕ್ಷಾ ಯಾತ್ರೆಯ ಸ್ವರೂಪ ನೀಡಿ ಪ್ರತೀ ದಿನ ಯಾತ್ರೆಗೆ ಒಬ್ಬೊಬ್ಬ ಫೈರ್ ಬ್ರಾಂಡ್ ನಾಯಕರನ್ನು ಕರೆಸಲು ತೀರ್ಮಾನಿಸಲಾಗಿದೆ.
ಬೆಂಗಳೂರು(ಅ.23): ಕೇರಳ ಮಾದರಿಯಲ್ಲಿ ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ನಡೆಸಲಿದೆ. ಪರಿವರ್ತನಾ ಯಾತ್ರೆಗೆ ಜನರಕ್ಷಾ ಯಾತ್ರೆಯ ಸ್ವರೂಪ ನೀಡಿ ಪ್ರತೀ ದಿನ ಯಾತ್ರೆಗೆ ಒಬ್ಬೊಬ್ಬ ಫೈರ್ ಬ್ರಾಂಡ್ ನಾಯಕರನ್ನು ಕರೆಸಲು ತೀರ್ಮಾನಿಸಲಾಗಿದೆ.
ಕೇರಳದಲ್ಲಿ ಈ ತಂತ್ರ ಅನುಸರಿಸಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಜನರಕ್ಷಾ ಯಾತ್ರೆ ಗಮನ ಸೆಳೆದಿತ್ತು. ಹೀಗಾಗಿ ಇದೇ ಮಾದರಿ ಪರಿವರ್ತನಾ ಯಾತ್ರೆಯಲ್ಲಿ ಅನುಷ್ಠಾನಗೊಳ್ಳಲಿದೆ. ಯೋಜನೆ ಪ್ರಕಾರ ಯಾತ್ರೆ ಉದ್ಘಾಟನೆಗೆ ಅಮಿತ್ ಶಾ, ಸಮಾರೋಪಕ್ಕೆ ನರೇಂದ್ರ ಮೋದಿ ಬರಲಿದ್ದಾರೆ. ಯಾತ್ರೆ ಮಧ್ಯೆ ಒಂದೊಂದು ದಿನ ಒಬ್ಬೊಬ್ಬ ನಾಯಕರ ಭೇಟಿ ಮಾಡುವ ನಿರೀಕ್ಷೆಯಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಗೋವಾ ಸಿಎಂ ಮನೋಹರ್ ಪರಿಕ್ಕರ್, ರಾಜಸ್ಥಾನ ಸಿಎಂ ವಸುಂಧರಾ ರಾಜೇ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಉಮಾಭಾರತಿ, ನಿರ್ಮಲಾ ಸೀತಾರಾಮನ್ ಹೀಗೆ ಫೈರ್ ಬ್ರಾಂಡ್ ನಾಯಕರು ಯಡಿಯೂರಪ್ಪ ಜೊತೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಮೂಲಕ ಆರಂಭದಿಂದ ಅಂತ್ಯದವರೆಗೂ ಯಾತ್ರೆಯ ಗಂಭೀರತೆ ಕಾಯ್ದುಕೊಳ್ಳಲು ಬಿಜೆಪಿ ಪ್ಲಾನ್ ಆಗಿದೆ.