ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವದ ಆಯುಷ್ಯಮಾನ್​ ಭಾರತ ಯೋಜನೆ ಯಸ್ವಿಯಾಗಿದ್ದು, ಇದಕ್ಕೆ  ಮೈಕ್ರೋಸಾಫ್ಟ್​​  ಸಂಸ್ಥಾಪಕ ಅಭಿನಂದನೆ ಹೇಳಿದ್ದಾರೆ.

ನವದೆಹಲಿ, (ಜ17):ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಬಡ ಜನರಿಗಾಗಿ ಆಯುಷ್​ಮಾನ್​ ಭಾರತ ಎಂಬ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆ ಭಾರಿ ಯಶಸ್ಸು ಕಂಡಿದೆ.

ಇನ್ನು ಈ ಯೋಜನೆಯ ಬಗ್ಗೆ ಮೈಕ್ರೋಸಾಫ್ಟ್​​ ಸಂಸ್ಥಾಪಕ ಬಿಲ್​ ಗೇಟ್ಸ್​ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಲ್ಲಿ ಇಲ್ಲಿ ಓಡುವೆ ಏಕೆ: 'ಆಯುಷ್ಮಾನ್ ಭಾರತ್' ಮನೆ ಬಾಗಿಲಿಗೆ ಬರ್ತಿದೆ ಬೇಕೆ?

Scroll to load tweet…

 ಆಯುಷ್​ಮಾನ್​ ಭಾರತ ಎಂಬ ಆರೋಗ್ಯ ಯೋಜನೆಯನ್ನು ಜಾರಿಗೆ ತಂದು 100 ದಿನಗಳಾಗಿವೆ. ಯೋಜನೆ ಭಾರಿ ಯಶಸ್ಸು ಕಂಡಿದೆ. ಈ ನೂರು ದಿನದಲ್ಲಿ ಕೋಟ್ಯಂತರ ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ ಭಾರತ ಸರ್ಕಾರವನ್ನು ಅಭಿನಂದಿಸಲು ಇಚ್ಛಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.