ದಯಾನಂದಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪ್ರವೀಣ್, ಹಿಮಾಚಲನಿಂದ ಸ್ವಾಮೀಜಿ ಹನಿಟ್ರ್ಯಾಪ್ ತಂತ್ರ ನಡೆಸಿದ್ದಾರೆ. ಸಿಡಿ ಇಟ್ಟುಕೊಂಡು ಸ್ವಾಮೀಜಿ ಬಳಿ ದುಡ್ಡು ವಸೂಲಿಗೆ ಮಾಸ್ಟರ್ ಪ್ಲಾನ್ ನಡೆಸಿದ್ದು, ಗ್ರಾಮದ ಯುವಕ ಹರೀಶ್ ಎಂಬುವನ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಬೆಂಗಳೂರು(ಅ.28): ದಯಾನಂದಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪ್ರವೀಣ್, ಹಿಮಾಚಲನಿಂದ ಸ್ವಾಮೀಜಿ ಹನಿಟ್ರ್ಯಾಪ್ ತಂತ್ರ ನಡೆಸಿದ್ದಾರೆ. ಸಿಡಿ ಇಟ್ಟುಕೊಂಡು ಸ್ವಾಮೀಜಿ ಬಳಿ ದುಡ್ಡು ವಸೂಲಿಗೆ ಮಾಸ್ಟರ್ ಪ್ಲಾನ್ ನಡೆಸಿದ್ದು, ಗ್ರಾಮದ ಯುವಕ ಹರೀಶ್ ಎಂಬುವನ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ.
ಸ್ವಾಮೀಜಿ ಪರ ಮಠದ ಭಕ್ತರಿಂದ ಹರೀಶ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಘಟನೆ ಬಳಿಕ ಹರೀಶ್ ತಲೆಮರೆಸಿಕೊಂಡಿದ್ದಾನೆ. ಇನ್ನು ವಿಡಿಯೋದಲ್ಲಿ ಹಿಮಾಚಲ, ಪ್ರವೀಣ್ ಬಗ್ಗೆ ಮಾಹಿತಿ ನೀಡಿರುವ ಹರೀಶ್ ನಮ್ಮ ಬಳಿ ಇದೆ ರಾಸಲೀಲೆ ಸಿಡಿ ಇದೆ, ಸ್ವಾಮೀಜಿ ಬಳಿ 20 ಲಕ್ಷ ಕೇಳುವಂತೆ ಹಿಮಾಚಲ ಆಮಿಷವೊಡ್ಡಿದ್ರು ಎಂದಿದ್ದಾನೆ.

