ಬೆಂಗಳೂರಿಗರೇ ಎಚ್ಚರ! ರಾಜಧಾನಿಗೆ ಎದುರಾಗಿದೆ ಉಗ್ರ ಭೀತಿ
ಬೆಂಗಳೂರಿಗರೇ ಎಚ್ಚರ.. ಎಚ್ಚರ! ರಾಜ್ಯ ರಾಜಧಾನಿಗೆ ಉಗ್ರರ ಭೀತಿ ಎದುರಾಗಿದೆ.
ಬೆಂಗಳೂರು (ಜ.26): ಬೆಂಗಳೂರಿಗರೇ ಎಚ್ಚರ.. ಎಚ್ಚರ! ರಾಜ್ಯ ರಾಜಧಾನಿಗೆ ಉಗ್ರರ ಭೀತಿ ಎದುರಾಗಿದೆ.
ಗಣರಾಜ್ಯೋತ್ಸವ ದಿನಾಚರಣೆಯಂದೇ ವಿದ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ನಡೆಸಿದ್ದಾರೆ. ಕಾಶ್ಮೀರಿ ಮೂಲದ ಶಂಕಿತ ಉಗ್ರರು ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಗೃಹ ಇಲಾಖೆಗೆ ಮಾಹಿತಿ ನೀಡಿದೆ.
ಉಗ್ರರ ಬೆದರಿಕೆ ಹಿನ್ನಲೆಯಲ್ಲಿ ಇದೇ ಮೊದಲ ಭಾರಿಗೆ ಮಾಣಿಕ್ ಷಾ ಪರೇಡ್ ಮೈದಾನದ ಮೇಲೆ ಕಮಾಂಡ್ ಗರುಡ ಪಡೆ ಬಿಗಿ ಭದ್ರತೆ ಒದಗಿಸಿತ್ತು. ಮಾಣಿಕ್ ಶಾ ಮೈದಾನದ ಹೊರಗೆ, ಒಳಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.