Asianet Suvarna News Asianet Suvarna News

ಹೆಲಿಕಾಪ್ಟರ್‌ಗಿಲ್ಲ ಅನುಮತಿ: ಫೋನ್‌ನಲ್ಲೇ ಮಾತಾಡಿದ ಯೋಗಿ!

ಪ.ಬಂಗಾಳದಲ್ಲಿ ಮುಂದುವರೆದ ಟಿಎಂಸಿ VS ಬಿಜೆಪಿ ವಾರ್| ಉತ್ತರ ಪ್ರದೇಶ ಸಿಎಂ ಹೆಲಿಕಾಪ್ಟರ್‌ ಇಳಿಯಲು ಅನುಮತಿ ನಿರಾಕರಣೆ| ಫೋನ್ ಮೂಲಕವೇ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್| ಉತ್ತರ ಬಂಗಾಳದ ರಾಯ್‌ಗಂಜ್ ಮತ್ತು ಬಲೂರ್‌ಘಾಟ್‌ನಲ್ಲಿ ಯೋಗಿ ಸಭೆ|

Bengal Government Refuses Landing Permission To Yogi Helicopter
Author
Bengaluru, First Published Feb 3, 2019, 4:03 PM IST

ಕೋಲ್ಕತ್ತಾ(ಫೆ.03): ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಇಳಿಸಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದೆ. 

ಉತ್ತರ ಬಂಗಾಳದ ರಾಯ್‌ಗಂಜ್ ಮತ್ತು ಬಲೂರ್‌ಘಾಟ್‌ನಲ್ಲಿ ಇಂದು ಯೋಗಿ ಒಟ್ಟು ಎರಡು ರ‍್ಯಾಲಿಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡದಿರುವುದರಿಂದ ಫೋನ್ ಮುಖಾಂತರವೇ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಈ ಮೊದಲು ಮಾಲ್ಡಾ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್‌ ಇಳಿಸುವುದಕ್ಕೂ ಮಮತಾ ಸರ್ಕಾರ ಅನುಮತಿ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios