ತಿನ್ನೋದು ಕರ್ನಾಟಕದ ಅನ್ನ; ಇರೋದು ಮಾತ್ರ ತಮಿಳು ವ್ಯಾಮೋಹ
ಸಿನಿಮಾ ಸ್ಪಾಟ್ ಆಯ್ತು ಬಿಬಿಎಂಪಿ | ಬಿಬಿಎಂಪಿಯಲ್ಲಿ ತಮಿಳು ಸಿನಿಮಾ ಶೂಟಿಂಗ್ | ಶೂಟಿಂಗ್ಗೆ ಅವಕಾಶ ಮಾಡಿಕೊಟ್ಟಿದ್ದು ಯಾರು ಗೊತ್ತಾ?
ಬೆಂಗಳೂರು (ನ. 09): ಬಿಬಿಎಂಪಿ ಕಚೇರಿಯಲ್ಲಿ ತಮಿಳು ಸಿನಿಮಾ ಶೂಟ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವ್ಯಾಪಕ ಸಾರ್ವಜನಿಕ ಟೀಕೆಗೆ ಕಾರಣವಾಗಿದೆ.
ಬಿಬಿಎಂಪಿಯಲ್ಲಿ ಶೂಟಿಂಗ್ ಮಾಡಿದ್ರೂ ಹೇಳೋರ್ ಕೇಳೋರೇ ಇಲ್ಲ!ಬಿಬಿಎಂಪಿ ಮೇಯರ್ ಗೂ ಗೊತ್ತಿಲ್ಲದೇ ಅವಕಾಶ ಮಾಡಿಕೊಟ್ಟಿದ್ದು ಯಾರು ಎಂಬ ಪ್ರಶ್ನೆ ಉದ್ಭವವಾಗಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಬಿಎಂಪಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿ ಕೆಲಸ ನಿರ್ವಾಯಿಸುತ್ತಿದ್ದ ಮನೋಜ್ ರಾಜನ್ ಎಂಬ ಅಧಿಕಾರಿ ತಮಿಳು ಮೇಲಿನ ವ್ಯಾಮೋಹದಿಂದ ಬಿಬಿಎಂಪಿ ಕಚೇರಿಯಲ್ಲಿ ಸಿನಿಮಾ ಶೂಟಿಂಗ್ ಗೆ ಅವಕಾಶ ಮಾಡಿಕೊಟ್ಟಿದ್ದರು. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ಸಹ ಆ್ಯಕ್ಟ್ ಮಾಡಿದ್ದಾರೆ.