ಪ್ರವೀಣ್​ ಸೂದ್​ ಅವರು 2017ರ ಅಕ್ಟೋಬರ್​ನಲ್ಲಿ ಎಡಿಜಿಪಿಯಿಂದ ಡಿಜಿ ಹುದ್ದೆಗೆ ಬಡ್ತಿ ಹೊಂದಲಿದ್ದು, ಅಲ್ಲಿಯವರೆಗೂ ಕಮಿಷನರ್​ ಹುದ್ದೆ ಇಲ್ಲ ಎಂದು ಇಲಾಖೆಯ ಲೆಕ್ಕಾಚಾರವಾಗಿತ್ತು. ಸರ್ಕಾರ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದು, ಬೆಂಗಳೂರಿಗೆ ನೋತನ ಪೊಲೀಸ್​ ಸಾರಥಿಯನ್ನು ನಿಯೋಜನೆ ಮಾಡಿದೆ.

ಬೆಂಗಳೂರು(ಜು.31): ಬೆಂಗಳೂರು ಪೊಲೀಸ್​​ ಇಲಾಖೆಯ ಸಾರಥಿಯನ್ನು ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ. ಕೇವಲ 7 ತಿಂಗಳ ಕಾಲ ಕಮಿಷನರ್​​ ಕಾರ್ಯ ನಿರ್ವಹಿಸಿದ ಅವರಿಗೆ ಕೋಕ್​​ ನೀಡಿ, ಟಿ.ಸುನಿಲ್​ ಕುಮಾರ್​ ಅವರಿಗೆ ಮಣೆ ಹಾಕಲಾಗಿದೆ. ತುಂಬ ದಿನಗಳ ಪ್ರಯತ್ನದ ಬಳಿಕ ಸುನಿಲ್​​ ಕುಮಾರ್​ ಕೊನೆಗೂ ಪೊಲೀಸ್​ ಕಮಿಷನರ್​​ ಹುದ್ದೆಯನ್ನು ಇಂದು ಅಲಂಕರಿಸಿದ್ದಾರೆ.

ಪ್ರವೀಣ್​ ಸೂದ್​ ಅವರು 2017ರ ಅಕ್ಟೋಬರ್​ನಲ್ಲಿ ಎಡಿಜಿಪಿಯಿಂದ ಡಿಜಿ ಹುದ್ದೆಗೆ ಬಡ್ತಿ ಹೊಂದಲಿದ್ದು, ಅಲ್ಲಿಯವರೆಗೂ ಕಮಿಷನರ್​ ಹುದ್ದೆ ಇಲ್ಲ ಎಂದು ಇಲಾಖೆಯ ಲೆಕ್ಕಾಚಾರವಾಗಿತ್ತು. ಸರ್ಕಾರ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದು, ಬೆಂಗಳೂರಿಗೆ ನೋತನ ಪೊಲೀಸ್​ ಸಾರಥಿಯನ್ನು ನಿಯೋಜನೆ ಮಾಡಿದೆ.

ಪೊಲೀಸ್​ ಆಯುಕ್ತರಾಗಿ ಅಧಿಕಾರಿ ಸ್ವೀಕರಿಸಿರುವ ಸುನಿಲ್​​ ಕುಮಾರ್​ ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಮೂಲದವರು. 1989ರ ಬ್ಯಾಚ್​ನ ಕರ್ನಾಟಕ ಕೇಡರ್​​ ಅಧಿಕಾರಿಯಾಗಿ ಆಯ್ಕೆಯಾದ ಸುನಿಲ್​ ಕುಮಾರ್ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಸ್​ಪಿ ಆಗಿ, ಬೆಂಗಳೂರು ಹೆಚ್ಚುವರಿ ಪೊಲೀಸ್​ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಕೂಡ ಅವರಿಗಿದ್ದು, ಬೆಂಗಳೂರು ನಗರದ ಬಗ್ಗೆ ಸಾಕಷ್ಟು ಅನುಭನವ ಹೊಂದಿದ್ದಾರೆ. ಅಲ್ಲದೆ, ಬೆಂಗಳೂರು ಪೊಲೀಸ್​ ಆಯುಕ್ತರಾಗುವ ಬಹುದಿನ ಅವರ ಕನಸು ಇಂದು ನನಸಾಗಿದೆ.

ಹೋರಾಟಗಾರರ ಮೇಲೆ ಕೇಸ್ ಹಾಕಿದ್ದಕ್ಕೆ ವರ್ಗಾವಣೆ ?

ಸುವರ್ಣ ನ್ಯೂಸ್'ಗೆ ಬಂದಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ ಮೆಟ್ರೋ ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್ ಹಾಕಿದ್ದಕ್ಕೆ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.