ದೇಶದಿಂದ ಭಯೋತ್ಪಾದನೆಯನ್ನು ಹೊಡೆದುರುಳಿಸಲು ಶ್ರಮಿಸುತ್ತಿರುವ ಭಾರತೀಯ ಸೇನೆ ನಿನ್ನೆ 6 ಲಷ್ಕರೆ ಉಗ್ರರನ್ನು ಹತ್ಯೆ ಮಾಡಿದೆ.

ಬಂಡಿಪೋರ (ನ.19): ದೇಶದಿಂದ ಭಯೋತ್ಪಾದನೆಯನ್ನು ಹೊಡೆದುರುಳಿಸಲು ಶ್ರಮಿಸುತ್ತಿರುವ ಭಾರತೀಯ ಸೇನೆ ನಿನ್ನೆ 6 ಲಷ್ಕರೆ ಉಗ್ರರನ್ನು ಹತ್ಯೆ ಮಾಡಿದೆ.

ಬಂಡಿಪೋರ ಎನ್​ಕೌಂಟರ್​ ಬಗ್ಗೆ ಸೇನೆ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಜೆಎಸ್​ ಸಂದು, ಡಿಜಿಪಿ ಎಸ್​ಪಿ ವೇದ ಹತ್ಯೆ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಉಗ್ರರನ್ನು ಹತ್ತಿಕ್ಕಲಾಗುತ್ತಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತಿದೆ. ಲಷ್ಕರೆ ಮುಖಂಡ 26/11 ರ ದಾಳಿಯ ರೂವಾರಿ ಲಕ್ವಿ ಸಹೋದರ ಸಂಬಂಧಿಯನ್ನು ಬಂಡಿಪೋರ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ. 2017ರಲ್ಲೇ 190 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಲಷ್ಕರ್​ ಈ ತೋಯ್ಬಾ ಸಂಘಟನೆ ಕಾರ್ಯಚಟುವಟಿಕೆಗಳಿಗೆ ಲಗಾಮು ಹಾಕಲಾಗಿದೆ. ಸಿಆರ್​ಫಿಎಫ್​, ಸೇನೆ ಮತ್ತು ಕಾಶ್ಮೀರದ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಉಗ್ರವಾದಕ್ಕೆ ಸೇರಲು ಯುವಕರು ಹಿಂಜರಿಯುತ್ತಿದ್ದಾರೆ. ಕಣಿವೆಯಲ್ಲಿ ಶಾಂತಿ ನೆಲೆಸುತ್ತಿದೆ. ವಿಶೇಷ ಪಡೆಯನ್ನು ಬಳಸಿ, ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.