ಹೋಂ ಸ್ಟೇ ದಾಳಿ ವೇಳೆ ಸಿಕ್ಕಿಬಿದ್ದಿದ್ದ ನಾಲ್ವರಿಗೆ ಜಾಮೀನು
ಕುಶಾಲನಗರ (ಸೆ.17): ಹೋಂ ಸ್ಟೇ ಮೇಲೆ ದಾಳಿ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ವಿಧಾನಸಭೆ ಶಾಸಕರ ಪುತ್ರ ರಾಜೀವ್ ಸೇರಿದಂತೆ ನಾಲ್ವರಿಗೆ ಇಲ್ಲಿನ ಜೆಎಂಎಫ್ಸಿ ಕೋರ್ಟ್ ಜಾಮೀನು ನೀಡಿದೆ.
ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪಗಳ ಆಧಾರದಲ್ಲಿ ಸೆಪ್ಟೆಂಬರ್ 11ರ ರಾತ್ರಿ ಪೊಲೀಸರು ಕುಶಾಲನಗರದ ಕೂರ್ಗ್ ರಿವರ್ ವ್ಯೂ ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದರು.
ಆ ಸಂದರ್ಭದಲ್ಲಿ ತುರುವೇಕೆರೆ ಶಾಸಕ ಕೃಷ್ಣಪ್ಪ ಪುತ್ರ ಕೆ.ರಾಜೀವ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳಿಗೆ ತಲಾ 25 ಸಾವಿರ ಬಾಂಡ್ ಮೇಲೆ ಜಾಮೀನು ನೀಡಿರುವ ದ ಕೋರ್ಟ್, ಪ್ರತಿ ತಿಂಗಳ 2ನೇ ಶನಿವಾರ ಕುಶಾಲನಗರ ಗ್ರಾ. ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದೆ.