Asianet Suvarna News Asianet Suvarna News

ಹಣ ಸಿಗದೆ ಹತಾಶರಾದ ದೆಹಲಿಗರಿಂದ ಎಟಿಎಂಗೆ ಪೂಜೆ!

ದೆಹಲಿಯ ಜಗತ್'ಪುರಿ ಇಲಾಖೆಯ ಸುಮಾರು 50 ಕ್ಕೂ ಅಧಿಕ ಮಂದಿ ಸೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ೆಟಿಎಂ ಮಷೀನ್'ಗಳಿಗೆ ಈ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ವ್ಯಕ್ತಿಯೊಬ್ಬರು 'ಕೇಂದ್ರ ಜಾರಿಗೊಳಿಸಿದ ನೋಟ್ ಬ್ಯಾನ್ ಬಳಿಕ ಜನರು ಪರದಾಡುತ್ತಿರುವುದನ್ನು ಕಂಡು, ಅವರ ಸಮಸ್ಯೆ ನಿವಾರಣೆಯಾಗಲಿ ಎಂಬ ಆಶಯದೊಂದಿಗೆ ನಾವು ಈ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ' ಎಂದಿದ್ದಾರೆ.  

ATM Pooja In New Delhi

ನವದೆಹಲಿ(ಡಿ.05): ಪೂರ್ವ ದೆಹಲಿಯ ಬ್ಯಾಂಕ್ ಹಾಗೂ ಎಟಿಎಂ ಒರಗೆ 'ನೋ ಕ್ಯಾಷ್' ಎಂಬ ಸಂದೇಶ ಕಂಡು ಹತಾಶರಾದ ನಿವಾಸಿಗಳು ಭಾನುವಾರದಂದು ಎಟಿಎಂಗಳ 'ಪೂಜೆ' ಮಾಡುವ ಕಾರ್ಯವನ್ನು ಆರಂಭಿಸಿದ್ದಾರೆ. ಈ ಪೂಜೆಯ ವೇಳೆ ಎಟಿಎಂನಲ್ಲಿ ಹಣವಿರಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದಾರೆ.

ದೆಹಲಿಯ ಜಗತ್'ಪುರಿ ಇಲಾಖೆಯ ಸುಮಾರು 50 ಕ್ಕೂ ಅಧಿಕ ಮಂದಿ ಸೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ೆಟಿಎಂ ಮಷೀನ್'ಗಳಿಗೆ ಈ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ವ್ಯಕ್ತಿಯೊಬ್ಬರು 'ಕೇಂದ್ರ ಜಾರಿಗೊಳಿಸಿದ ನೋಟ್ ಬ್ಯಾನ್ ಬಳಿಕ ಜನರು ಪರದಾಡುತ್ತಿರುವುದನ್ನು ಕಂಡು, ಅವರ ಸಮಸ್ಯೆ ನಿವಾರಣೆಯಾಗಲಿ ಎಂಬ ಆಶಯದೊಂದಿಗೆ ನಾವು ಈ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ' ಎಂದಿದ್ದಾರೆ.  

ಇನ್ನು ಇದೇ ವಿಚಾರವಾಗಿ ಮಾತನಾಡಿದ ಪುನೀತ್ ತಿವಾರಿ 'ಈವರೆಗೆ ವೃದ್ಧರು ಹಾಗೂ ತಯವಕ ಯುವತಿಯರು ವಾಕಿಂಗ್ ಮಾಡುತ್ತಿರುವುದನ್ನು ನೋಡುತ್ತಿದ್ದೆ. ಆದರೆ ನೋಟ್ ಬ್ಯಾನ್ ಬಳಿಕ ಜನರು ಎಟಿಎಂಗಾಗಿ ಸುತ್ತಾಡುವುದು ಸಾಮಾನ್ಯವಾಗಿದೆ' ಎಂದಿದ್ದಾರೆ.

Latest Videos
Follow Us:
Download App:
  • android
  • ios