ಮೊದಲ ಪುಣ್ಯ ತಿಥಿಯಲ್ಲಿ ಅಜಾತ ಶತ್ರುವನ್ನು ನೆನೆದ ಮೋದಿ, ಶಾ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಹಲವು ಗಣ್ಯರು ನಮನ ಸಲ್ಲಿಸಿದ್ದಾರೆ.
ದೆಹಲಿ [ಆ.16]: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿ ಹಲವು ಬಿಜೆಪಿ ನಾಯಕರು, ಸಚಿವರು ಸಮಾಧಿ ಸ್ಥಳವಾದ ಸದೈವ್ ಆಟಲ್ ಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
ವಾಜಪೇಯಿಗೆ ಕಾಡಿದ್ದ ಸಂಖ್ಯೆ ‘13’ ಈಗ ಕಾಂಗ್ರೆಸನ್ನು ಕಾಡಿದೆ!
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಕಳೆದ ವರ್ಷ ಆ. 16 ರಂದು ನಿಧನರಾಗಿದ್ದರು.
ಎಲೆಕ್ಷನ್ ಸ್ವಾರಸ್ಯ: 6 ವಿವಿಧ ಕ್ಷೇತ್ರಗಳಲ್ಲಿ ಗೆದ್ದಿದ್ದ ವಾಜಪೇಯಿ!