ಅಕ್ರಮ ಮರಳು ದಂಧೆಕೋರರನ್ನು ಹಿಡಿಯಲು 5 ಕಿಮೀ ಓಡಿದ ಪೊಲೀಸ್ ಅಧಿಕಾರಿ
ಟ್ರ್ಯಾಕ್ಟರ್ ಚಾಲಕರು ಕಕ್ಕಾಬಿಕ್ಕಿಯಾಗಿ ಓಡಲು ಮುಂದಾಗಿದ್ದಾರೆ. ಆದರೆ ಬೆಂಬಿಡದ ಪೋಲಿಸ್ ಅಧಿಕಾರಿ ಬರೋಬ್ಬರಿ 4 ರಿಂದ 5 ಕಿ.ಮೀ ಬೆನ್ನತ್ತಿ ಟ್ರ್ಯಾಕ್ಟರ್ ಮಾಲೀಕನನ್ನು ಬಂಧಿಸಿದ್ದಾರೆ.
ಬಾಗಲಕೋಟೆ (ಜ.16): ಅಕ್ರಮ ಮರಳುದಂಧೆಯಲ್ಲಿ ನಿರತರಾಗಿದ್ದ ಖದೀಮರನ್ನು ಬಂಧಿಸಲು ಪೊಲೀಸ್ ಅಧಿಕಾರಿಯೊಬ್ಬರು ಸುಮಾರು 5 ಕಿ.ಮೀವರೆಗೆ ಓಡೋಡಿ ಬೆನ್ನಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮದ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು, ಈ ಮದ್ಯೆ ಗಂಜಿಹಾಳ ಬಳಿ ಏಎಸ್'ಪಿ ಲಕ್ಷ್ಮಿಪ್ರಸಾದ ವಾಹನದಲ್ಲಿ ಹೋಗುತ್ತಿರುವ ವೇಳೆ ಹೊಲದಲ್ಲಿ ಅಕ್ರಮ ಮರಳು ತುಂಬಿದ್ದ ಟ್ರ್ಯಾಕ್ಟರ್ ಕಂಡು ವಿಚಾರಿಸಲು ತೆರಳಲು ಮುಂದಾಗಿದ್ದಾರೆ.
ಇದನ್ನು ಕಂಡ ಟ್ರ್ಯಾಕ್ಟರ್ ಚಾಲಕರು ಕಕ್ಕಾಬಿಕ್ಕಿಯಾಗಿ ಓಡಲು ಮುಂದಾಗಿದ್ದಾರೆ. ಆದರೆ ಬೆಂಬಿಡದ ಪೋಲಿಸ್ ಅಧಿಕಾರಿ ಬರೋಬ್ಬರಿ 4 ರಿಂದ 5 ಕಿ.ಮೀ ಬೆನ್ನತ್ತಿ ಟ್ರ್ಯಾಕ್ಟರ್ ಮಾಲೀಕನನ್ನು ಬಂಧಿಸಿದ್ದಾರೆ.